ಭಾರೀ ಮಳೆ : ಹಾನಿ ಸ್ಥಳಗಳಿಗೆ ಉಪತಹಶೀಲ್ದಾರ್ ಭೇಟಿ

ಮಲೇಬೆನ್ನೂರು, ಸೆ.4- ಬುಧ ವಾರ ಸಂಜೆ ಸುರಿದ ಭಾರೀ ಮಳೆಯಿಂ ದಾಗಿ ಹರಳಹಳ್ಳಿಯಲ್ಲಿ 3, ಕೊಮಾರ ನಹಳ್ಳಿ ಒಂದು ಮನೆಗೆ ಭಾಗಶಃ ಹಾನಿಯಾಗಿರುತ್ತದೆ.

ಸಂಕ್ಲೀಪುರದಲ್ಲಿ ಸುಮಾರು 60 ಎಕರೆ ಭತ್ತದ  ಗದ್ದೆ ನೀರಿನಲ್ಲಿ ಮುಳುಗಡೆಯಾಗಿದ್ದು, ಸಂಕ್ಲೀಪುರ-ಮುಕ್ತೇನಹಳ್ಳಿ ಸಂಪರ್ಕ ರಸ್ತೆ ಹಳ್ಳದ ನೀರಿನಲ್ಲಿ ಜಲಾವೃತಗೊಂಡಿದೆ.

ಹಾನಿ ಸ್ಥಳಗಳಿಗೆ ಶುಕ್ರವಾರ ಉಪತಹಶೀಲ್ದಾರ್ ಆರ್.ರವಿ, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಗ್ರಾಮ ಸಹಾ ಯಕ ರಾಜಪ್ಪ ಭೇಟಿ ನೀಡಿ ಪರಿಶೀಲಿಸಿ, ಜಿಲ್ಲಾಧಿಕಾರಿ ಗಳಿಗೆ ವರದಿ ನೀಡುವುದಾಗಿ ತಿಳಿಸಿದರು.

ರೈತರಾದ ನಿಂಗಪ್ಪ ವೀರೇಶ್, ನಿಂಗನಗೌಡ ಪಾಟೀಲ್, ರಾಮನ ಗೌಡ, ಪ್ರಭು, ಕರಿಬಸಪ್ಪ ಈ ವೇಳೆ ಹಾಜರಿದ್ದರು.

error: Content is protected !!