ಪಿ.ಎಲ್.ಡಿ. ಬ್ಯಾಂಕ್ 83ನೇ ಸಭೆ

ದಾವಣಗೆರೆ,ಡಿ.15- ದಾವಣಗೆರೆ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2019-20ನೇ ಸಾಲಿನ 83ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ನಗರದ ಶ್ರೀ ತರಳಬಾಳು ಸಭಾ ಭವನದಲ್ಲಿ ಬ್ಯಾಂಕಿನ ಅಧ್ಯಕ್ಷ ಕೆ.ಎಂ. ರೇವಣಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ವೇದಿಕೆಯಲ್ಲಿ ಉಪಾಧ್ಯಕ್ಷ ಎಂ.ಪಿ. ಶಿವಕುಮಾರ್, ನಿರ್ದೇಶಕರುಗಳಾದ ಆರ್.ಜಿ.ಕುಬೇಂದ್ರಪ್ಪ, ಜಿ.ಎಂ. ಮಂಜುನಾಥ್ ಶಿರಮಗೊಂಡನಹಳ್ಳಿ, ಎ.ಎಂ. ಮಂಜುನಾಥ್ ಶಿರಮಗೊಂಡನಹಳ್ಳಿ, ಬಿ.ಎಸ್. ರಮೇಶ್, ಕೆ. ಬಸವರಾಜಪ್ಪ, ವೈ.ಬಿ. ನಾಗರಾಜ್, ರಾಜಪ್ಪ, ಶ್ರೀಮತಿ ರೇಣುಕಮ್ಮ, ಶ್ರೀಮತಿ ಸಿ.ಯು. ಜ್ಯೋತಿ, ಶ್ರೀಮತಿ ಟಿ.ಎಂ.ಸವಿತಾ, ಶ್ರೀಮತಿ ವಿ.ಕಾಳಮ್ಮ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಿ.ಎಸ್. ರಮೇಶ್ ಸ್ವಾಗತಿಸಿದರು. ಕೆ. ಬಸವರಾಜಪ್ಪ ವಂದಿಸಿದರು. ಬ್ಯಾಂಕಿನ ವ್ಯವಸ್ಥಾಪಕರಾದ ಎಸ್. ಸ್ಮಿತಾ ಪಾಟೀಲ್ ನಿರೂಪಿಸಿದರು.

error: Content is protected !!