ಧರಣಿ ನಿರತ ವಾಲ್ಮೀಕಿ ಶ್ರೀ ಭೇಟಿ ಮಾಡಿದ ಎಂ.ಪಿ.ವೀಣಾ ಮಹಾಂತೇಶ್

ಹರಪನಹಳ್ಳಿ, ಮಾ.27- ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ,  ವಾಲ್ಮೀಕಿ ನಾಯಕ ಸಮದಾಯಕ್ಕೆ ಶೇ 7.5 ಮೀಸಲಾತಿ ಹೆಚ್ಚಳ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಬೆಂಗಳೂರಿನ  ಫ್ರೀಡಂ ಪಾರ್ಕ್‌ನಲ್ಲಿ ಕೈಗೊಂಡಿರುವ ಧರಣಿ ಸತ್ಯಾಗ್ರಹಕ್ಕೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಎಂ.ಪಿ.ವೀಣಾ ಮಹಾಂತೇಶ್  ಹಾಗೂ ಕೆಪಿಸಿಸಿ ವೈದ್ಯಕೀಯ ಘಟಕದ ರಾಜ್ಯ ಉಪಾಧ್ಯಕ್ಷ ಮಹಾಂತೇಶ್  ಚರಂತಿಮಠ್ ಭಾಗವಹಿಸಿ ಬೆಂಬಲ ವ್ಯಕ್ತ ಪಡಿಸಿದರು.

ಮರಿಯಮ್ಮನಹಳ್ಳಿ ಕಲಾವಿದೆ ನಾಗರತ್ನಮ್ಮ, ತಾಲ್ಲೂಕು ಯುವ ಕಾಂಗ್ರೆಸ್‌  ಉಪಾಧ್ಯಕ್ಷ ದಾದಾಪೀರ್‌ ಮಕರಬ್ಬಿ, ಮುಖಂಡರಾದ  ಗಾಯತ್ರಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!