ಚಿತ್ರದುರ್ಗ ತಾಲ್ಲೂಕು ಹಲ್ಲೇಹಾಲ್ನ ಸದ್ರುಲ್ಲಾ ಖಾನ್ ಬಂಧನ
ದಾವಣಗೆರೆ, ಫೆ.28- ರಾಜೀವ್ ಗಾಂಧಿ ವಿವಿ ಮತ್ತು ವಿ.ಟಿ.ಯು ನಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ ಹೇಳಿ 2.78 ಲಕ್ಷ ರೂ. ಪಡೆದು ವಂಚನೆ ಮಾಡಿದ್ದ ಆರೋಪಿಯನ್ನು ದಾವಣಗೆರೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕು ಹಲ್ಲೇಹಾಲ್ ಗ್ರಾಮದ ಕೃಷಿ ಕೆಲಸ ಮಾಡಿಕೊಂಡಿದ್ದ ಹೆಚ್.ಟಿ ಸದ್ರುಲ್ಲಾ ಖಾನ್ ಬಂಧಿತ ಆರೋಪಿ.
ಕಳೆದ ಫೆಬ್ರವರಿ 20ರಂದು ಸದ್ರುಲ್ಲಾ ಖಾನ್, `ನಾನು ರಾಜ್ಯಪಾಲರ ಸೆಕ್ರೆಟರಿ ಯೆಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಯುನಿರ್ವಸಿಟಿಗಳಿಗೆ ರಾಜ್ಯಪಾಲರ ನಾಮನಿರ್ದೇಶಿತ ಸದಸ್ಯತ್ವಗಳ ಹೆಸರನ್ನು ನಾನೇ ನಾಮಿನೇಟ್ ಮಾಡುತ್ತೇನೆ ಎಂದು ದಾವಣಗೆರೆ ನಗರದ ವೈದ್ಯರಿಗೆ ಪೋನ್ ಕರೆ ಮಾಡಿದ್ದಾನೆ.
ವೈದ್ಯರಿಗೆ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಬೆಂಗಳೂರು ಮತ್ತು ವೈದ್ಯರ ಪತ್ನಿಗೆ ವಿ.ಟಿ.ಯು ಬೆಳಗಾವಿಯಲ್ಲಿ ರಾಜ್ಯಪಾಲರ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ಹೇಳಿ ಒಟ್ಟು 2,78,720 ರೂಪಾಯಿಗಳನ್ನು ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾನೆ.
ವೈದ್ಯ ದಂಪತಿಗಳು ವಂಚನೆಗೊಳ ಗಾಗಿದ್ದು ತಿಳಿದು ಹಣ ವಾಪಾಸ್ ಕೇಳಿದಾಗ, ಆರೋಪಿಯು ನಿಮ್ಮ ವಿರುದ್ದ ಸುಳ್ಳು ದೂರನ್ನು ದಾಖಲು ಮಾಡಿ ನಿಮ್ಮ ಕೆ.ಎಂ.ಸಿ ರಿಜಿಸ್ಟರ್ ಬ್ಲಾಕ್ ಮಾಡಿಸುವುದಾಗಿ ಬೆದರಿಸಿದ್ದಾನೆ.
ಈ ಬಗ್ಗೆ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕ ರಣ ದಾಖಲಿಸಿ ತನಿಖೆ ನಡೆಸಲಾಗಿತ್ತು.
ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ ಪ್ರಭಾರ ಪೊಲೀಸ್ ನ್ಸ್ಪೆಕ್ಟರ್ ಶಿಲ್ಪ ವೈ, ಸುನೀಲ್ ತೇಲಿ, ರೂಪ ತೆಂಬದ್, ಸಿಬ್ಬಂದಿಗಳಾದ ಅಶೋಕ, ಗೋವಿಂದರಾಜ್, ಸೋಮಶೇಖರ್, ಲೋಹಿತ್, ಯೋಗೀಶ್ ನಾಯ್ಕ ರವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡವು ಆರೋಪಿ ಹಲ್ಲೇಹಾಲ್ ಗ್ರಾಮದ ಕೃಷಿ ಕೆಲಸ ಮಾಡಿಕೊಂಡಿದ್ದ ಹೆಚ್.ಟಿ ಸದ್ರುಲ್ಲಾ ಖಾನ್ ಬಂಧಿಸಿ, 40,000 ರೂಪಾಯಿ ಮೌಲ್ಯದ ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್ಗಳನ್ನು ವಶಪಡಿಸಿಕೊಂಡಿದೆ.
ಆರೋಪಿಯು ಈ ಹಿಂದೆ ಇದೇ ರೀತಿ ಯೂನಿರ್ವಸಿಟಿಗಳಲ್ಲಿ ರಾಜ್ಯಪಾಲರ ನಾಮನಿರ್ದೇಶನ್ಯದ ಸದಸ್ಯತ್ವ ಕೊಡಿಸುವುದಾಗಿ ಮತ್ತು ಸರ್ಕಾರಿ ಕೆಲಸ ಕೊಡಿಸುವುದಾಗಿ ಸರ್ವಜನಿಕರಿಗೆ ವಂಚನೆ ಮಾಡಿದ್ದು ತಿಳಿದು ಬಂದಿದೆ.
ಬೆಂಗಳೂರು ನಗರದ ವಿಧಾನಸೌಧ, ಗೋವಿಂದರಾಜನಗರ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆಯ ಕೋಟೆ ಪೊಲೀಸ್ ಠಾಣೆ, ಕೋಲಾರ ಜಿಲ್ಲೆ, ಗೌಣಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.