ಲೇಬರ್ ಕಾಲೋನಿ 6ನೇ ತಿರುವಿನಲ್ಲಿರುವ (ಕೆಎಸ್ಸಾರ್ಟಿಸಿ ಬಸ್ ಸ್ಟ್ಯಾಂಡ್ ರಸ್ತೆ) ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಬರುವ ಮಾರ್ಚ್ 4ರ ವರೆಗೆ ದೇವಸ್ಥಾನದಲ್ಲಿ 57ನೇ ವರ್ಷದ ಶಿವರಾತ್ರಿ ಜಾಗರಣೆ ಮಹೋತ್ಸವ ನಡೆಯಲಿದೆ.
ಇಂದು ಬೆಳಿಗ್ಗೆ 8 ಗಂಟೆಗೆ ಮಹಾರುದ್ರಾಭಿಷೇಕ ಸಂಜೆ 7 ಗಂಟೆಗೆ ಭಜನಾ ಕಾರ್ಯಕ್ರಮದೊಂದಿಗೆ ಜಾಗರಣೆ ನಡೆಯಲಿದೆ. ನಾಳೆ ಶನಿವಾರ ಬೆಳಗ್ಗೆ 8 ಗಂಟೆಗೆ ಮಹಾಪೂಜೆ ನಂತರ ವಾದ್ಯ ವೈಭವಗಳೊಂದಿಗೆ ಸ್ವಾಮಿಯ ಮೆರವಣಿಗೆ ಹಾಗೂ ಮಧ್ಯಾಹ್ನ ಪ್ರಸಾದ ವಿನಿಯೋಗ ನಡೆಯಲಿದೆ.
ನಾಡಿದ್ದು ಭಾನುವಾರ 8 ಗಂಟೆೆಗೆ ಸ್ವಾಮಿಗೆ ಪೂಜೆ ಪಳಾರ ಹಾಕಿಸುವುದು. 4ರಂದು ಸಂಜೆ ಪೂಜೆ ನಡೆಯಲಿದ್ದು, ನಂತರ ಪಳಾರ ವಿತರಣೆ ನಡೆಯಲಿದೆ.