ಕೊಂಡಜ್ಜಿ ಬಸಪ್ಪನವರ ಆದರ್ಶ ಯುವಕರಿಗೆ ಮಾದರಿ

ಕೊಂಡಜ್ಜಿ ಬಸಪ್ಪನವರ ಆದರ್ಶ ಯುವಕರಿಗೆ ಮಾದರಿ

ದಾವಣಗೆರೆ, ಫೆ. 23 – ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಸಂಸ್ಥಾಪಕರ ದಿನಾಚರಣೆ ಹಾಗೂ ಚಿಂತನಾ ದಿನಾಚರಣೆ ಪ್ರಯುಕ್ತ ಶ್ರೀರಾಮ ಪಾರ್ಕ್ ಆವರಣದ ಸ್ವಚ್ಛತೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಪಾರ್ಕ್‌ನಲ್ಲಿ ಸ್ವಚ್ಛತೆ ಮಾಡುವುದರ ಮುಖಾಂತರ ಕೊಂಡಜ್ಜಿ ಬಸಪ್ಪ ಅವರು ಕರ್ನಾಟಕದ ರಾಜಕಾರಣಿ ಮತ್ತು ಕರ್ನಾಟಕದ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿ ನಾಯಕರಾಗಿದ್ದರು ಎಂದು ಹೇಳಿದರು.

ಕೊಂಡಜ್ಜಿ ಇದು ಹರಿಹರ-ದಾವಣಗೆರೆಗೆ ಸರಿಸಮಾನ ದೂರದ ಒಂದು ಸಾಧಾರಣ ಹಳ್ಳಿ. ಆದರೆ ಇದಕ್ಕೆ ಇಂದು ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯ ಮಟ್ಟದಲ್ಲಿ ಹೆಸರು ಪಡೆದಿದ್ದು ‘ಅದರ ಕಾರಣ ಕರ್ತರು ಅದೇ ಗ್ರಾಮದವರಾದ ಕೊಂಡಜ್ಜಿ ಬಸಪ್ಪನವರು. ಅವರು ರಾಜಕಾರಣಿಯಾಗಿದ್ದರೂ ಅದನ್ನೂ ಮೀರಿ ಬೆಳೆದವರು. ಅವರು ಜನಿಸಿದ್ದು ಸಾಧಾರಣ ಕುಟುಂಬದಲ್ಲಿ. ಕಷ್ಟಪಟ್ಟು, ಅವರಿವರ ಸಹಾಯದಿಂದ ಓದಿ ಮುಂದೆ ಬಂದವರು. ರಾಜಕಾರಣಕ್ಕಿಂತಲೂ ಅವರಿಗೆ ಹೆಚ್ಚು ಪ್ರಿಯವಾಗಿದ್ದ ಕ್ಷೇತ್ರ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆ. ಶಾಲಾ ಮಕ್ಕಳಲ್ಲಿ ಸ್ವಯಂ ಸೇವೆ, ಶಿಸ್ತು, ಸಜ್ಜನಿಕೆ, ಉತ್ತಮ ನಡೆ, ನುಡಿ, ಸೇವಾ ಮನೋಭಾವ, ಧೈರ್ಯ, ಸಾಹಸ ಪ್ರವೃತ್ತಿ ಮುಂತಾದ ಗುಣಗಳನ್ನು ಬೆಳೆಸಲು ವಿಶ್ವಮಟ್ಟದಲ್ಲಿ ಹುಟ್ಟಿಕೊಂಡ ಈ ಆಂದೋಲನದಲ್ಲಿ ಅವರು ತಮ್ಮನ್ನು ಪೂರ್ಣ ಮಟ್ಟದಲ್ಲಿ ತೊಡಗಿಸಿ ಕೊಂಡಿದ್ದರು.  ಮಕ್ಕಳು, ಯುವಕರು, ದೈಹಿಕ, ಬೌದ್ಧಿಕ, ಸಾಮಾಜಿಕ, ದೈವಿಕವಾಗಿ ಪೂರ್ಣ ಪ್ರಮಾಣದ ಉನ್ನತಿಯನ್ನು ಸಾಧಿಸುವುದು ಅಲ್ಲದೆ, ಪ್ರಾದೇಶಿಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಹೊಣೆಗಾರಿಕೆ ಯುಳ್ಳ ವ್ಯಕ್ತಿಗಳಾಗಿ ರೂಪುಗೊಳ್ಳುವರು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪ್ರವೀಣ್, ಹರೀಶ್, ಪರಶುರಾಮ್, ಗೋಪಾಲ್, ಚೇತನ್ ಕುಮಾರ್, ರವೀಂದ್ರ ಸ್ವಾಮಿ, ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ ಕಾರ್ಯದರ್ಶಿಗಳು ಮತ್ತು ಶ್ರೀಮತಿ ಅಶ್ವಿನಿ ಎಸ್‌ಜಿವಿ ರವರು ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದರು.

error: Content is protected !!