ಮೈಸೂರು ಮುಕ್ತ ವಿವಿ ಕುಲ ಸಚಿವ ಡಾ.ಹೆಚ್. ವಿಶ್ವನಾಥ್‌ಗೆ ಪ್ರಶಸ್ತಿ

ಮೈಸೂರು ಮುಕ್ತ ವಿವಿ ಕುಲ ಸಚಿವ  ಡಾ.ಹೆಚ್. ವಿಶ್ವನಾಥ್‌ಗೆ ಪ್ರಶಸ್ತಿ

ದಾವಣಗೆರೆ, ಫೆ. 18 – ಕರ್ನಾಟಕ  ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಹೆಚ್‌. ವಿಶ್ವನಾಥ್ ಅವರು ಕನ್ನಡ ಪ್ರಭ – ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆ ವತಿಯಿಂದ ನೀಡಲಾಗುವ ಸುವರ್ಣ ಕನ್ನಡಿಗ – 2025 ವಾರ್ಷಿಕ ಪ್ರಶಸ್ತಿಗೆ  ಭಾಜನರಾಗಿದ್ದಾರೆ.

ಡಾ.ಹೆಚ್. ವಿಶ್ವನಾಥ್ ಅವರ  ಶೈಕ್ಷಣಿಕ  ಕ್ಷೇತ್ರದ  ಅಪಾರ ಸಾಧನೆ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲ ಸಚಿವ (ಪರೀಕ್ಷಾಂಗ) ಸ್ಥಾನದಲ್ಲಿನ‌  ಶೈಕ್ಷಣಿಕ‌ ಸಾಧನೆಯನ್ನು ಪರಿಗಣಿಸಿ ಈ  ಪ್ರಶಸ್ತಿ ನೀಡಲಾಗಿದ್ದು, ಬೆಂಗಳೂರಿನ  ತಾಜ್ ಪಂಚತಾರಾ ಹೋಟೆಲ್‌ನಲ್ಲಿ  ಇಂದು  ಸಂಜೆ  ನಡೆದ  ವರ್ಣರಂಜಿತ  ಕಾರ್ಯಕ್ರಮದಲ್ಲಿ  ಪ್ರಶಸ್ತಿ  ಪ್ರದಾನ  ಮಾಡಿ  ಗೌರವಿಸಲಾಯಿತು.

error: Content is protected !!