ದಾವಣಗೆರೆ, ಫೆ. 10- ತುಮಕೂರಿನ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರೂ, ತ್ರಿವಿಧ ದಾಸೋಹಿಗಳೂ, ನಡೆದಾಡುವ ದೇವರೆಂದೇ ಎಲ್ಲರ ಮನಸ್ಸಿನಲ್ಲಿ ನೆಲೆ ನಿಂತಿರುವ ಮಹಾ ತಪಸ್ವಿ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 6ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶ್ರದ್ಧಾ – ಭಕ್ತಿಯಿಂದ ಆಚರಿಸಲಾಯಿತು.
ಭಕ್ತಿ ಗೀತೆಗಳ ಹಿನ್ನೆಲೆಯಲ್ಲಿ ಮಕ್ಕಳು ಶ್ರೀಗಳ ವರ ಭಾವಚಿತ್ರಕ್ಕೆ ಮತ್ತು ಪಾದುಕೆಗಳಿಗೆ ನಮಿಸಿ ಬಿಲ್ಪತ್ರೆಗಳನ್ನು ಸಮರ್ಪಿಸಿದರು. ಸಂಸ್ಥೆಯ ಕಾರ್ಯ ದರ್ಶಿ ಡಿ.ಎಸ್. ಹೇಮಂತ್ ನೇತೃತ್ವದಲ್ಲಿ ಎಲ್ಲಾ ಮಕ್ಕಳಿಗೆ ಫಲಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಸ್ವಾಮೀಜಿಯವರ ಸೇವಾದೀಕ್ಷೆ ಬಗ್ಗೆ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೌಜ ಅವರು ಮಕ್ಕಳಿಗೆ ತಿಳಿಸಿಕೊಟ್ಟರು. ಸಂಸ್ಥೆಯ ಸಂಸ್ಥಾಪಕರಾದ ಶಿವಣ್ಣನವರು ಗುರುಗಳ ಬಗ್ಗೆ ಹೊಂದಿದ್ದ ಅನನ್ಯ ಭಕ್ತಿಭಾವವನ್ನು ವಿವರಿಸಿದರು.