ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾಗಿ ಕುಮಾರಸ್ವಾಮಿ

ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾಗಿ ಕುಮಾರಸ್ವಾಮಿ

ಟಿ. ನಾಗರಾಜ್ ಪ್ರಧಾನ ಕಾರ್ಯದರ್ಶಿ, ಅರುಣ್ ಖಜಾಂಚಿ

ದಾವಣಗೆರೆ, ಅ.27- ಜಿಲ್ಲಾ ಪತ್ರಿಕಾ ವಿತರಕರ ಸರ್ವ ಸದಸ್ಯರ ಸಭೆಯು ನಗರದ ಶ್ರೀ ಶಿವಯೋಗ ಮಂದಿರದ ಆವರಣದಲ್ಲಿ ಇಂದು ನಡೆಯಿತು. ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರನ್ನಾಗಿ ಕೆ. ಎನ್. ಕಾಮತ್, ಅಧ್ಯಕ್ಷರನ್ನಾಗಿ ಕುಮಾರಸ್ವಾಮಿ ಟಿ., ಉಪಾಧ್ಯಕ್ಷರನ್ನಾಗಿ ಎ. ಎನ್. ಕೃಷ್ಣ ಸೇರಿದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ಟಿ. ಪಿ., ಸಹ ಕಾರ್ಯ ದರ್ಶಿಯಾಗಿ  ನಿಂಗಪ್ಪ ಎ., ಸಂಘಟನಾ ಕಾರ್ಯದರ್ಶಿಯಾಗಿ ಕರಿಬಸವರಾಜ್ ಎಂ. ಬಿ., ಖಜಾಂಚಿ ಅರುಣ್‌ಕುಮಾರ್‌ ಕೆ., ನಿರ್ದೇಶಕರುಗಳಾಗಿ ರಘುರಾಮ್ ಎಚ್.,  ರವಿ ಡಿ., ಮಂಜುನಾಥ್ ಎಮ್., ಪ್ರಸನ್ನ ಕುಮಾರ್ ಎನ್., ಶಂಕರ ಆರ್., ಪ್ರಕಾಶ್ ಪಿ., ಸುಧಾಕರ ಆರ್., ಪ್ರದೀಪ್ ಬಿ., ಆಯ್ಕೆಯಾಗಿದ್ದಾರೆ.

error: Content is protected !!