ಹಳೆಪೇಟೆ ಶಾಲೆಯ ಆರ್. ಬೃಂದಾ ರಾಜ್ಯಕ್ಕೆ ಪ್ರಥಮ

ಹಳೆಪೇಟೆ ಶಾಲೆಯ ಆರ್. ಬೃಂದಾ ರಾಜ್ಯಕ್ಕೆ ಪ್ರಥಮ

ದಾವಣಗೆರೆ, ಅ.25- ಸ್ಥಳೀಯ ಹಳೆಪೇಟೆಯ ಶತಮಾನದ ಶಾಲೆಯಾದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಆರ್. ಬೃಂದಾ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಭಾಗೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಈ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಾದ ಐಶ್ವರ್ಯ, ವಿ., ಬೃಂದಾ ಆರ್., ಧನುಷ್ ಮತ್ತು 8ನೇ ತರಗತಿಯ ಎ.ಶಿವಾಜಿರಾವ್ ಸ್ಪರ್ಧಿಸಿದ್ದರು. 

ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕರಾದ ಸುಜಾತ ಅವರು ಪ್ರತಿನಿತ್ಯ ತರಬೇತಿ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದಾರೆ ಮತ್ತು ಬೇಸಿಗೆ ಹಾಗೂ ದಸರಾ ರಜೆಯಲ್ಲಿ ಕೂಡ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದರು. 

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಹಳೆಪೇಟೆ ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿ ಆರ್.ಬೃಂದಾಗೆ ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಶೇರ್‌ಅಲಿ, ಸಿಇಒ ಸರಳ, ಶಿವಲೀಲಾ,  ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ. ದಾಸರ್, ಅಧ್ಯಕ್ಷ ನಿಂಗರಾಜ ಹಾವನೂರು, ಕ್ಲಸ್ಟರ್ ಸಿ.ಆರ್.ಪಿ. ಮಲ್ಲಿಕಾರ್ಜುನ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೋಡಬಾಳ ಚನ್ನಬಸಪ್ಪ, ಮುಖ್ಯೋಪಾಧ್ಯಾಯ ಲೋಕಣ್ಣ, ಶಿಕ್ಷಕರಾದ ಸದಾನಂದ ಕೆ. ಹೆಚ್., ಶಿಕ್ಷಕಿ ಅನಸೂಯ ಆರ್.ಸಿ., ಸುಜಾತ, ನಮಿತಾ ಎಂ.ಎನ್., ಜಯಶ್ರೀ, ಶಿಲ್ಪಾ, ರೂಪಾ ಮತ್ತು ಶಾಲೆಯ ಅಡುಗೆ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!