ನಗರದಲ್ಲಿ ಇಂದು ಸಾಹಿತ್ಯ – ಸಂವಾದ

ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟೆಬಲ್ ಟ್ರಸ್ಟ್ (ದಾವಣಗೆರೆ) ಹಾಗೂ ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗ (ದಾವಣಗೆರೆ) ಇವರ ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲ ಭವನದಲ್ಲಿ ಇಂದು ಸಂಜೆ 4 ಗಂಟೆಗೆ  ಸಾಹಿತ್ಯ – ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ  ಎಂದು ಕಾರ್ಯಕ್ರಮ ಸಂಯೋಜಕ ಮಹಾಂತೇಶ್ ಬಿ.ನಿಟ್ಟೂರು ಹಾಗೂ ಸಂಚಾಲಕರಾದ ಗಂಗಾಧರ ಬಿ. ಎಲ್. ನಿಟ್ಟೂರ್ ತಿಳಿಸಿದ್ದಾರೆ. 

ಕೃಷಿ ವಿಜ್ಞಾನಿ ಮತ್ತು ಸಾಹಿತಿಗಳಾದ ಕೆ.ಎನ್. ಗಣೇಶಯ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ  ಪ್ರೊ. ರಾಘವೇಂದ್ರ ಪಾಟೀಲ್, ಧಾರವಾಡ ಅವರು ಚಿಂತಕರಾಗಿ ಭಾಗವಹಿಸುವರು. 

ಸಾಹಿತಿಗಳಾದ ಬಿ.ಎನ್. ಮಲ್ಲೇಶ್, ಬಾ.ಮ.ಬಸವರಾಜಯ್ಯ,  ಡಾ. ದಾದಾಪೀರ್ ನವಿಲೇಹಾಳ್, ಓಂಕಾರಯ್ಯ ತವನಿಧಿ,  ಡಾ.ಆನಂದ್ ಋಗ್ವೇದಿ, ಶಿವಯೋಗಿ ಹಿರೇಮಠ್, ರಾಜಶೇಖರ ಗುಂಡಗತ್ತಿ, ಸುಬ್ರಹ್ಮಣ್ಯ ನಾಡಿಗೇರ್, ವೀರಭದ್ರಪ್ಪ ತೆಲಿಗಿ, ಪಾಪು ಗುರು ಸಂವಾದದಲ್ಲಿ ಪಾಲ್ಗೊಳ್ಳುವರು. 

error: Content is protected !!