ಕ್ರಮಕ್ಕೆ ಒತ್ತಾಯಿಸಿ ತಂಜೀಂ ಪ್ರತಿಭಟನೆ

ದಾವಣಗೆರೆ ಅ 25- ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನವಾಗಿ ಪ್ರಚೋದನಾಕಾರಿ ಭಾಷಣ ಮಾಡಿರುವ ಯತಿ ನರಸಿಂಹನಂದಾ ಸ್ವರಸ್ವತಿ ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ತಂಜೀಮುಲ್ ಮುಸ್ಲಿಂ ಮೀನ್ ಫಂಡ್ ಅಸೋಸಿಯೇಷನ್, ತಂಜೀಮ್ ಉಲೇಮಾ-ಎ-ಅಹಲೇ ಸುನ್ನತ್ ಸೇರಿದಂತೆ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಇಂದು ಮಿಲಾದ್ ಮೈದಾನದಲ್ಲಿ ನಡೆದ ಪ್ರತಿ ಭಟನಾ ಸಮಾವೇಶದಲ್ಲಿ ರಾಷ್ಟ್ರ ಪತಿಗೆ ಮನವಿ ಸಲ್ಲಿಸಲಾಯಿತು.

ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರಿಗೆ ಮನವಿ ಪತ್ರ ಅರ್ಪಿಸಲಾಯಿತು.  ತಂಜೀಮ್ ಅಧ್ಯಕ್ಷ ದಾದಾಪೀರ್ (ದಾದುಸೇಠ್ ) ಮೌಲಾನಾ ಮಹ ಮ್ಮದ್ ಹನೀಫ್ ರಜಾ, ಮಿಲಾದ್ ಸಮಿತಿ ಅಧ್ಯಕ್ಷ ಎ.ಬಿ. ಹಬೀಬ್ ಸಾಬ್, ಪದಾಧಿಕಾ ರಿಗಳಾದ ದಾದಾ ಪೀರ್, ಮಟನ್‌ ಮಹಮ್ಮದ್ ಅಲಿ, ಇಮ್ರಾನ್ ರಜಾ, ಶಫೀವುಲ್ಲಾ, ಸಾಬೀರ್ ಅಲಿ, ಇಮ್ತಿಯಾಜ್ ಸೇರಿದಂತೆ ಇನ್ನು ಅನೇಕ ಉಲೇಮಾಗಳು ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

error: Content is protected !!