ಕೆರೆ ಏರಿ ಒಡೆದು ನೂರಾರು ಎಕರೆ ಮೆಕ್ಕೆಜೋಳ, ಅಡಿಕೆ ತೋಟ ಜಲಾವೃತ

ಕೆರೆ ಏರಿ ಒಡೆದು ನೂರಾರು ಎಕರೆ ಮೆಕ್ಕೆಜೋಳ, ಅಡಿಕೆ ತೋಟ ಜಲಾವೃತ

ಹರಪನಹಳ್ಳಿ, ಅ. 18 – ತಾಲ್ಲೂಕಿನ ಜಗಳೂರು ಕ್ಷೇತ್ರದ ಕುರೇಮಾಗಾನಹಳ್ಳಿ ಕೆರೆ ಏರಿ ಒಡೆದ ಪರಿಣಾಮ, ನೂರಾರು ಎಕರೆ ಮೆಕ್ಕೆಜೋಳದ ಹೊಲ ಹಾಗೂ ಅಡಿಕೆ ತೋಟ ಜಲಾವೃತವಾಗಿವೆ.

ದಾವಣಗೆರೆ ತಾಲ್ಲೂಕಿನ ಅಣಜಿ ಹಾಗೂ ಉಚ್ಚಂಗಿ ದುರ್ಗಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದ ಕಾರಣ ವಾಹನ ಸವಾರರಿಗೆ ಆಡಚಣೆ ಆಗಿತ್ತು, ಅದಕ್ಕೆ ಗುಂಡಿಯನ್ನು ಗುರುತಿಸಲು ತೆಂಗಿನ ಗರಿಗಳನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡ ಲಿಂಗರಾಜ ಫಣಿಯಾಪುರ, ಬಣಕಾರ ಬಸವರಾಜ, ಗ್ರಾ.ಪಂ. ಸದಸ್ಯರಾದ ಪರಮೇಶಪ್ಪ, ಕೆಂಚವೀರಪ್ಪ, ವಿಜಯ್ ಕುಮಾರ್, ರಂಗಪ್ಪ, ನರೇಶ್, ಸುನೀಲ್, ಸುರೇಶ್, ಮಲ್ಲಿಕಾರ್ಜುನ್, ವಿಜಯ್ ಸೇರಿದಂತೆ ಉಪಸ್ಥಿತರಿದ್ದರು.

error: Content is protected !!