ಮಲೇಬೆನ್ನೂರಿನಲ್ಲಿ ಸಂಭ್ರಮದ ದೊಡ್ಡಎಡೆ ಜಾತ್ರೆ

ಮಲೇಬೆನ್ನೂರಿನಲ್ಲಿ ಸಂಭ್ರಮದ ದೊಡ್ಡಎಡೆ ಜಾತ್ರೆ

ಮಲೇಬೆನ್ನೂರು, ಅ.18- ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ ಹಾಗೂ ಮರಿಬನ್ನಿ ಅಂಗವಾಗಿ ಶುಕ್ರವಾರ  ದೊಡ್ಡಎಡೆ ಜಾತ್ರೆ ಸಂಭ್ರಮದಿಂದ ಜರುಗಿತು. 

ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶ್ರೀಗಳ ಸಾನ್ನಿಧ್ಯ ದಲ್ಲಿ ಬೆಳಿಗ್ಗೆ ದೇವಸ್ಥಾನದಲ್ಲಿ ಗ್ರಾಮದ ಎಲ್ಲಾ ದೇವರುಗಳಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ಮಾಡಿದ ನಂತರ ಬೀರಪ್ಪನ ಈರಗಾರರು ಶ್ರದ್ಧಾ-ಭಕ್ತಿಯಿಂದ ದೊಡ್ಡ ಪೂಜೆಯನ್ನು ನೆರವೇರಿಸಿದರು.

ದೇವಸ್ಥಾನದಲ್ಲಿ ಇಡೀ ದಿನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಬಿ.ವೀರಯ್ಯ, ಹರಿಹರ ತಾ. ಕುರುಬ ಸಂಘದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ಮುಖಂಡರಾದ ಪೂಜಾರ್ ಬಸಪ್ಪ, ಪಿ.ರೇವಣಪ್ಪ, ದೇವಸ್ಥಾನ ಕಮಿಟಿ ಅಧ್ಯಕ್ಷ ಪೂಜಾರ್ ನಾಗಪ್ಪ, ಕಾರ್ಯದರ್ಶಿ ಕೆ.ಪಿ.ಗಂಗಾಧರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!