ಚುನಾವಣಾ ನೀತಿ ಸಂಹಿತೆ: ರಾಣೇಬೆನ್ನೂರಿನಲ್ಲಿ ಸಾಂಕೇತಿಕವಾಗಿ ವಾಲ್ಮೀಕಿ ಜಯಂತಿ ಆಚರಣೆ

ಚುನಾವಣಾ ನೀತಿ ಸಂಹಿತೆ: ರಾಣೇಬೆನ್ನೂರಿನಲ್ಲಿ  ಸಾಂಕೇತಿಕವಾಗಿ ವಾಲ್ಮೀಕಿ ಜಯಂತಿ ಆಚರಣೆ

ರಾಣೇಬೆನ್ನೂರು, ಅ.18- ಶಿಗ್ಗಾಂವಿ – ಸವಣೂರು ವಿಧಾನಸಭೆ ಉಪಚುನಾವಣೆ ಘೋಷಣೆಯಿಂದಾಗಿ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಯಾಗಿರುವ ಕಾರಣ ಇಂದಿನ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಹಶೀಲ್ದಾರರ ಕಛೇರಿಯಲ್ಲಿ, ವಾಲೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದ ರೊಂದಿಗೆ ಸಾಂಕೇತಿಕವಾಗಿ ಆಚರಿಸಲಾಯಿತು. ತಹಶೀಲ್ದಾರ್‌ ಆರ್.ಎಚ್. ಬಾಗವಾನ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ ಕದರಮಂಡಲಗಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ಚಂದ್ರಣ್ಣ ಬೇಡರ, ತಾಪಂ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ,  ನಗರಸಭೆ ಸದಸ್ಯ ಶಶಿಧರ ಬಸೇನಾಯ್ಕರ, ಬಸವರಾಜ ತಳವಾರ, ರಮೇಶ ಬಸೇನಾಯ್ಕರ ಮತ್ತಿತರರಿದ್ದರು.

error: Content is protected !!