ಹರಪನಹಳ್ಳಿ, ಅ.18-ತಾಲ್ಲೂಕು ಸಿಂಗ್ರಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾರತದ ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣ ರಚಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿ. ಹಾಲೇಶ್, ಊರಿನ ಗಣ್ಯರಾದ ಟಿ. ಶೇಖರಪ್ಪ, ಈ. ಫಕ್ಕೀರಪ್ಪ, ಅಂಜಿನಪ್ಪ, ವಿಜಯ್ ಕುಮಾರ್, ಇ. ಫಕ್ಕಿರಾಜ್, ಬೀಡಿ ರುದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಎನ್. ಮಂಜುನಾಥ್ ಕಾರಬಾರಿ, ರಾಜ ನಾಯಕ್ ಹಾಗೂ ಇತರರು ಭಾಗವಹಿಸಿದ್ದರು.
October 20, 2024