ನಗರದಲ್ಲಿ ಇಂದು ದಿ ಟೀಮ್ ಅಕಾಡೆಮಿಯಿಂದ ಟಾಟಾ ಅವರಿಗೆ ಗೌರವ ಸಮರ್ಪಣೆ

ದಿ ಟೀಮ್ ಅಕಾಡೆಮಿ ದಾವಣಗೆರೆ ಮತ್ತು ಶಿವಮೊಗ್ಗ ವತಿಯಿಂದ ಪದ್ಮ ವಿಭೂಷಣ ರತನ್ ಟಾಟಾ ಅವರ ಸ್ಮರಣಾರ್ಥವಾಗಿ ಅವರ ಸ್ಫೂರ್ತಿದಾಯಕ ಜೀವನದ ಕುರಿತು ಪರಿಚಯ ಮತ್ತು ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ.

ಟೀಮ್ ಅಕಾಡೆಮಿ ಡೇ ಸ್ಕಾಲರ್ ಕ್ಯಾಂಪಸ್‌ನಲ್ಲಿ ಇಂದು ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಮತಿ ಆರ್. ವಿಜಯಕುಮಾರಿ ಅವರಿಂದ `ನಮ್ಮ ಹೆಮ್ಮೆಯ ರತ್ನ – ಬನ್ನಿ ನಮ್ಮ ರಾಷ್ಟ್ರೀಯ ಕಳಕಳಿಯ ಉದ್ಯಮಿಯ ಜೀವನಗಾಥೆ ತಿಳಿದು ಪ್ರೇರಣೆ ಪಡೆಯೋಣ’ ಪಿಪಿಟಿ ಪ್ರಸ್ತುತಿ ಏರ್ಪಡಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಉಪಸ್ಥಿತರಿರುವರು. ಗೌರವ ಅತಿಥಿಗಳಾಗಿ ಪತ್ರಕರ್ತ ಸದಾನಂದ ಹೆಗಡೆ ಭಾಗವಹಿಸಲಿದ್ದು, ದಿ ಟೀಮ್ ಅಕಾಡೆಮಿ ದಾವಣಗೆರೆ ಮತ್ತು ಶಿವಮೊಗ್ಗದ ಛೇರ್ಮನ್ ಕೆ.ಎಂ. ಮಂಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ವಿ.ವಿ.ಆರ್. ನಾಗ ಭೂಷಣಂ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ವಿ. ಸತ್ಯನಾರಾಯಣ, ಆಡಳಿತಾಧಿಕಾರಿ ಜಿ.ಕೆ. ಮಂಜಪ್ಪ, ಡೇ ಸ್ಕಾಲರ್ ಕ್ಯಾಂಪಸ್ ಪ್ರಾಂಶುಪಾಲರಾದ ಶ್ರೀಮತಿ ಎಂ. ಸುಭಾಷಿಣಿ, ಹಾಸ್ಟೆಲ್ ಕ್ಯಾಂಪಸ್ ಪ್ರಾಂಶುಪಾಲ ರಮೇಶ್ ಡಮ್ಮಳ್ಳಿ ಉಪಸ್ಥಿತರಿರುವರು.

error: Content is protected !!