ಇಂದಿನ ದಾವಣಗೆರೆ ಬಂದ್‌ಗೆ ಬೆಂಬಲ

ಇಂದಿನ ದಾವಣಗೆರೆ ಬಂದ್‌ಗೆ ಬೆಂಬಲ

ದಾವಣಗೆರೆ, ಅ.15-  ನಗರದ ಯುಬಿಡಿಟಿ ಕಾಲೇಜು ಖಾಸಗೀಕರಣ ಹಾಗೂ ಶೇ.50ರಷ್ಟು ಪೇಮೆಂಟ್ ಸೀಟ್ ನಿರ್ಧಾರ ವಿರೋಧಿಸಿ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ಉಳಿಸುವ ಸಲುವಾಗಿ ಎಐಡಿಎಸ್ಓ ಸಂಘಟನೆಯು ನಾಳೆ ದಿನಾಂಕ 16ರಂದು ಕರೆ ಕೊಟ್ಟಿರುವ ದಾವಣಗೆರೆ ಬಂದ್‌ಗೆ  ಬೆಂಬಲ ಇದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದ್ದಾರೆ. 

ಆರ್ಥಿಕವಾಗಿ ಹಿಂದುಳಿದ, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಬಡವರ ಮಕ್ಕಳ ಪಾಲಿಗೆ ವರದಾನವಾಗಿದ್ದ ಯುಬಿಡಿಟಿ ಕಾಲೇಜು ಉಳಿಸಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿದೆ. ಕಳೆದ 73 ವರ್ಷಗಳಲ್ಲಿ ಈ ಕಾಲೇಜಿನಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪೂರೈಸಿ ಬದುಕು ಕಟ್ಟಿಕೊಂಡಿದ್ದಾರೆ. ಇಂಥ ಪ್ರತಿಷ್ಠಿತ ಸಂಸ್ಥೆಯಲ್ಲಿ ಶುಲ್ಕ ಹೆಚ್ಚಳ ಮಾಡಿ ಪೇಮೆಂಟ್ ಸೀಟ್ ನೀಡಲು ಮುಂದಾಗಿರುವುದು ದುರದೃಷ್ಟಕರ. ಈ ನಿರ್ಧಾರದಿಂದ ಶೈಕ್ಷಣಿಕ ಅಸಮಾನತೆಯೂ ಹೆಚ್ಚುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 

error: Content is protected !!