ಪೋಸ್ಟರ್, ಟಿ-ಶರ್ಟ್ ಬಿಡುಗಡೆ

ಪೋಸ್ಟರ್,  ಟಿ-ಶರ್ಟ್ ಬಿಡುಗಡೆ

ದಾವಣಗೆರೆ, ಅ.15- ವಾಲ್ಮೀಕಿ ಜಯಂತ್ಯೋತ್ಸವದ ಪ್ರಯುಕ್ತ ಜನ ಜಾಗೃತಿಗಾಗಿ 7ನೇ ವರ್ಷದ ಬೃಹತ್ ಐತಿಹಾಸಿಕ ಬೈಕ್‌ ರಾಲಿಯನ್ನು ನಾಳೆ ದಿನಾಂಕ 16 ರ ಬುಧವಾರ ಬೆಳಿಗ್ಗೆ 10.30ಕ್ಕೆ ನಗರದಲ್ಲಿ ಆಯೋಜಿಸಲಾಗಿದೆ. 

ಇದರ ಅಂಗವಾಗಿ ಮಂಗಳವಾರ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಮಾಜಿ ಶಾಸಕ ಎಸ್. ವಿ. ರಾಮ‌‌ಚಂದ್ರಪ್ಪ ನೇತೃತ್ವದಲ್ಲಿ ನಾಯಕ ಸಮಾಜದ  ಅಧ್ಯಕ್ಷ ಬಿ. ವೀರಣ್ಣ ಪೋಸ್ಟರ್ ಹಾಗೂ ಟಿ-ಶರ್ಟ್ ಬಿಡುಗಡೆ ಮಾಡಿದರು.

ಬೈಕ್‌ ರಾಲಿಯು ಶ್ರೀ ರಾಜವೀರ ಮದಕರಿ ನಾಯಕ ವೃತ್ತದಿಂದ ಆರಂಭಗೊಳ್ಳಲಿದೆ. ವಾಲ್ಮೀಕಿ  ಗುರುಪೀಠದ ಪ್ರಸನ್ನಾನಂದ ಪುರಿ ಶ್ರೀಗಳು, ಶಾಸಕ ಬಿ.ದೇವೇಂದ್ರಪ್ಪ, ಶ್ರೀನಿವಾಸ್‌ ದಾಸಕರಿಯಪ್ಪ, ಆರ್.ಎಸ್.ಶೇಖರಪ್ಪ, ಆಗಮಿಸಲಿದ್ದಾರೆ. ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ್, ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ, ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಹದಡಿ ಹಾಲಪ್ಪ ಮತ್ತಿತರೆ ಸಮಾಜದ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ.  

ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ಯಾಗಲೆ  ಕೆ.ಆರ್.  ಮಂಜುನಾಥ್, ನಿರ್ದೇಶಕ ಫಣಿಯಾಪುರ ಲಿಂಗರಾಜ್, ಯುವ ಘಟಕದ ಅಧ್ಯಕ್ಷ ಬಸವರಾಜ್ ತೋಟದ, ಶಾಮನೂರು ಪ್ರವೀಣ್, ಜಗದೀಶ್, ಅಣಜಿಗೆರೆ ಮಲ್ಲಿಕಾರ್ಜುನ, ಪರಶುರಾಮ, ಪ್ರವೀಣ್ ಹೂವಿನಮಡು, ಗೋಶಾಲೆ ಸುರೇಶ್, ಸತೀಶ್, ಅಜಯ್‌ ಸೇರಿದಂತೆ ಸಮಾಜ ಬಾಂಧವರು ಇದ್ದರು.

error: Content is protected !!