ಪದ್ದು ಕಾಫಿ ಬಾರ್ ಕಟ್ಟೆ ಗೆಳೆಯರ ಬಳಗದಿಂದ ರತನ್ ಟಾಟಾಗೆ ಶ್ರದ್ಧಾಂಜಲಿ

ಪದ್ದು ಕಾಫಿ ಬಾರ್ ಕಟ್ಟೆ ಗೆಳೆಯರ ಬಳಗದಿಂದ ರತನ್ ಟಾಟಾಗೆ ಶ್ರದ್ಧಾಂಜಲಿ

ದಾವಣಗೆರೆ, ಅ. 15- ಭಾರತದ ಉದ್ಯಮ ವಲಯದ ಬೆಳವಣಿಗೆಗಾಗಿ ದೊಡ್ಡ ಕೊಡುಗೆ ನೀಡುತ್ತಾ, ಶತಕೋಟಿ ಸಮಾಜಮುಖಿ ಕೆಲಸಗಳಿಂದ ಹೆಸರುವಾಸಿಯಾಗಿದ್ದ ಉದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಪದ್ದು ಕಾಫಿ ಬಾರ್ ಕಟ್ಟೆ ಗೆಳೆಯರ ಬಳಗದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ರತನ್ ಟಾಟಾ ಭಾರತದಲ್ಲಿ ಕೇವಲ ಉದ್ಯಮ ಮಾತ್ರ ಕಟ್ಟಲಿಲ್ಲ. ಲಕ್ಷಾಂತರ ಬಡವರ ಮನೆಗಳ ನಂದಾದೀಪವಾಗಿದ್ದಾರೆ. ಕೇವಲ ಲಾಭಕ್ಕಾಗಿ ಎಂದಿಗೂ ಉದ್ಯಮ ಮಾಡದೇ, ಶ್ರೀಮಂತರ ಪಟ್ಟಿಯಲ್ಲಿ ಹೆಸರನ್ನೂ ಬಯಸದೇ ಕೊಡಗೈ ದಾನಿಯಾಗಿದ್ದರು ಎಂದು ಸ್ಮರಿಸಿದರು. ಭಾರತದಲ್ಲಿ ಉಪ್ಪು ಮಾರಾಟದಿಂದ ಹಿಡಿದು ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಕಾರ್‍ಗಳ ತನಕ ವ್ಯಾಪಾರ ಮಾಡಿ ಸೈ ಎನಿಸಿಕೊಂಡವರು. ಟಾಟಾ ಸಂಸ್ಥೆಯನ್ನು ಕಟ್ಟಿ ಬೆಳೆಸಿ ದೊಡ್ಡ ಮಟ್ಟದ ಸಾಲಿನಲ್ಲಿ ತಂದು ನಿಲ್ಲಿಸಿದವರು ರತನ್ ಟಾಟಾ ಎಂದರು.

ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್, ಕೆ.ಜಿ. ಶಿವಕುಮಾರ್, ಕೇರಂ ಗಣೇಶ್, ಡಿ.ಎನ್. ಜಗದೀಶ್, ವಿಜಯಕುಮಾರ್, ಗೋಪಾಲ್ ಜಿ., ಯುವರಾಜ್, ವೆಂಕಟೇಶ್‍ಮೂರ್ತಿ, ಸತೀಶ್ ಶೆಟ್ಟಿ, ವಿಜಯ್, ಕರಿಬಸಪ್ಪ, ಬುನಿಯನ್ ಭಾಸ್ಕರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!