ರೋಟರಿ, ಇನ್ನರ್‌ವ್ಹೀಲ್‌ನಿಂದ ನೇತ್ರ ದಿವಸ್‌

ರೋಟರಿ, ಇನ್ನರ್‌ವ್ಹೀಲ್‌ನಿಂದ ನೇತ್ರ ದಿವಸ್‌

ದಾವಣಗೆರೆ, ಅ.15- ರೋಟರಿ ಹಾಗೂ ಇನ್ನರ್‌ವ್ಹೀಲ್‌ ಸಹಯೋಗದಲ್ಲಿ ನೇತ್ರ ದಿವಸ್‌ ನೇತ್ರದಾನ ಕಾರ್ಯಕ್ರಮವನ್ನು ನಡೆಸಲಾಯಿತು. ವಿಶೇಷವಾಗಿ ನೇತ್ರ ದಿವಸ್‌ ಕಾರ್ಯಕ್ರಮವನ್ನು ಪ್ರಪಂಚದಾದ್ಯಂತ ಆಚರಿಸಲಾಯಿತು.

ಎಸ್‌.ಎನ್‌. ಮಳವಳ್ಳಿ ಹಾಗೂ ಶ್ರೀಮತಿ ಪ್ರೇಮ ಮಹೇಶ್ವರಪ್ಪ ಅವರು ಕ್ರಮವಾಗಿ ಸಮಾರಂಭದ ಅಧ್ಯಕ್ಷರಾಗಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಜಿಲ್ಲಾಧಿಕಾರಿ   ನೇತ್ರದಾನ ಹಾಗೂ ನೇತ್ರದಾನ ಅಭಿಯಾನದ ಕುರಿತು ವಿವರವಾಗಿ ಚರ್ಚಿಸಿ, ನೇತ್ರದಾನ ಮಹತ್ವದ ಬಗ್ಗೆ ಮಾಹಿತಿ ನೀಡಿದರು. 

ಮನುಷ್ಯ ಮರಣ ಹೊಂದಿದ ನಂತರ ತನ್ನ ಕಣ್ಣುಗಳನ್ನು ದಾನ ಮಾಡಿ ಇನ್ನೊಬ್ಬರ ಜೀವಕ್ಕೆ ಬೆಳಕಾಗಬೇಕು. ಅದಕ್ಕೆ ಕೆಲವೊಂದು ನಿಯಮಗ ಳನ್ನು ಪಾಲಿಸಬೇಕಾಗುತ್ತದೆ. ಇದಕ್ಕೆ ಯಾವುದೇ ಜಾತಿ, ಲಿಂಗ, ಶ್ರೀಮಂತ, ಬಡವ ಎಂಬ ಭೇದವಿರುವುದಿಲ್ಲ ಎಂದು ಅವರು ಹೇಳಿದರು.

ಅಂಜಿನ ಮೂರ್ತಿ ವಂದಿಸಿದರು. ನಮ್ಮ ಸಂಸ್ಥೆಯಿಂದ ಪ್ರೇಮ, ನಾಗರತ್ನ, ಶಿಲ್ಪ, ಭಾಗ್ಯ, ಸೇರಿದಂತೆ ಇನ್ನು ಕೆಲವರು ಸ್ವಯಂ ಪ್ರೇರಿತರಾಗಿ ನೇತ್ರದಾನಕ್ಕೆ ಒಪ್ಪಿದರು.

error: Content is protected !!