ಮೈನವಿರೇಳಿಸಿದ ಮಲ್ಲಗಂಬ ಪ್ರದರ್ಶನ

ಮೈನವಿರೇಳಿಸಿದ ಮಲ್ಲಗಂಬ ಪ್ರದರ್ಶನ

ಹೊನ್ನಾಳಿ, ಅ.8- ತಾಲ್ಲೂಕಿನ ಕುಂದೂರು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಧಾರ್ಮಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿವೆ.

ಮಹೋತ್ಸವದ 5ನೇ ದಿನದಂದು ಧಾರವಾಡ ಜಿಲ್ಲೆಯ ಸಿರಗುಪ್ಪಿಯ ರಾಜು ಶಿವನಗೌಡರ್ ಮತ್ತು ಶಿವಯೋಗಿ ಇವರ ತಂಡದಿಂದ ಮಲ್ಲಗಂಬ ಪ್ರದರ್ಶನ ಆಕರ್ಷಕವಾಗಿ ನಡೆಯಿತು.

ನಿರ್ದಿಷ್ಟ ಅಡಿಯ ಮರದ ಕಂಬದ ಮೇಲೆ ಮಲ್ಲಗಂಬದ ವಿವಿಧ ಪಟ್ಟುಗಳನ್ನು ಹಾಕಿದರು, ಹಗ್ಗದ ಸಹಾಯದಿಂದ ವಿವಿಧ ಬಗೆಯ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿ ಮೈನವಿರೇಳಿಸುವಂತೆ ಮಾಡಿದರು.

ಈ ವೇಳೆ ದೇವಾಲಯದ ಅಧ್ಯಕ್ಷರು, ಸದಸ್ಯರು, ಉತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮದ ಮುಖಂಡ ವಿಕ್ರಮ್‌ ಪಾಟೀಲ್, ಗ್ರಾ.ಪಂ. ಸದಸ್ಯರಾದ ಪ್ರಸನ್ನಕುಮಾರ್, ಧನಂಜಯ ಮತ್ತು ವೀರಣ್ಣಗೌಡ, ಸಿದ್ಧೇಶ್, ಬಸವರಾಜ್, ಅನಿಲ್ ನಾಡಿಗ್, ಸುರೋಳ್ ಪ್ರಸನ್ನ  ಮತ್ತು ಇತರರಿದ್ದರು.

error: Content is protected !!