ರಾಣೇಬೆನ್ನೂರಿನಲ್ಲಿ ಇಂದು ಗಾಂಧಿ ಸ್ಮೃತಿ ಜನಜಾಗೃತಿ ಜಾಥಾ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನ  ಗಾಂಧಿಸ್ಮೃತಿ ಜನಜಾಗೃತಿ ಜಾಥಾ ಮತ್ತು ಸಮಾವೇಶವು ಶ್ರೀ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ವಿವೇಕಾನಂದಾಶ್ರಮದ ಶ್ರೀ ಪ್ರಕಾಶಾನಂದ ಮಹಾರಾಜರ ಸಾನ್ನಿಧ್ಯದಲ್ಲಿ ಇಂದು ನಡೆಯಲಿದೆ.

ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸುವರು. ಜನಜಾಗೃತಿಯ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್ ಅಧ್ಯಕ್ಷತೆ ವಹಿಸುವರು.

ಮಾಜಿ ಶಾಸಕ ಅರುಣ ಪೂಜಾರ, ಪಾನಮುಕ್ತರಿಗೆ ಅಭಿನಂದನೆ ಸಲ್ಲಿಸುವರು. ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ,  ಪೊಲೀಸ್ ಅಧೀಕ್ಷಕ ಅಂಶುಕುಮಾರ, ಜನಜಾಗೃತಿಯ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ, ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಅತಿಥಿಗಳು.

ತಹಶೀಲ್ದಾರ್‌ ಆರ್.ಎಚ್. ಭಗವಾನ್, ಪೌರಾಯುಕ್ತ ಎಫ್‌.ಐ. ಇಂಗಳಗಿ, ಎಸ್.ಐ. ಗಡ್ಡೆಪ್ಪ ಗುಂಜಟಗಿ, ನಗರಸಭೆ ಸದಸ್ಯೆ ಸುಮಂಗಲಾ ಪಾಟೀಲ, ಸಮಿತಿಯ ಸದಸ್ಯರಾದ ಬಸವರಾಜ ಹುಲ್ಲತ್ತಿ, ವೀರಭದ್ರಪ್ಪ ಮೋಟಗಿ, ಬುಳ್ಳಪ್ಪ ಬಣಕಾರ, ವನಿತಾ ಗುತ್ತಲ, ಮಾರ್ಕಂಡಪ್ಪ ನೇಕಾರ, ಚಂದ್ರಶೇಖರ ಬಣಕಾರ ಮತ್ತು ಇತರರು ಉಪಸ್ಥಿತರಿರುವರು.

error: Content is protected !!