ಹಲಗೇರಿ ಶ್ರೀ ಬನಶಂಕರಿ ಸಮಿತಿಗೆ ಆಯ್ಕೆ

ರಾಣೇಬೆನ್ನೂರು,ಸೆ.25- ತಾಲ್ಲೂಕಿನ ಹಲಗೇರಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನ ಸೇವಾ ಸಮಿತಿಗೆ  ನೂತನ ಪದಾಧಿಕಾರಿಗಳನ್ನು ಆಯ್ಕೆ ಅವಿರೋಧವಾಗಿ ನಡೆಯಿತು.

ನಿನ್ನೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಬದ್ರೇಶ ಹೆದ್ದೇರಿ ಅಧ್ಯಕ್ಷ, ಸುಬ್ರಹ್ಮಣ್ಯ ಮಲ್ಲಾಡದ ಉಪಾಧ್ಯಕ್ಷ, ರವಿಕಿರಣ ಮಲ್ಲಾಡದ ಕಾರ್ಯದರ್ಶಿ, ಚೇತನ ರಿತ್ತಿ ಖಜಾಂಚಿ, ಅನಿಲ ಶಿಗ್ಲಿ, ಬಸವರಾಜ ಮಲ್ಲಾಡದ, ಚಂದ್ರಮ್ಮ ಹತ್ತಿಕಾಳ, ಕಿರಣ ಶಾಡಂಬಿ, ಶಿವಲೀಲಾ ಶಿಗ್ಲಿ, ಗಿರೀಶ ಮಲ್ಲಾಡದ, ಶಿವಾನಂದ ಬಾವಿಕಟ್ಟಿ, ಲಕ್ಷ್ಮಿ ಶಿಗ್ಲಿ, ನಾಗರಾಜ ಮಲ್ಲಾಡದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

error: Content is protected !!