29ರಿಂದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಗೆ ಉಚಿತ ತರಬೇತಿ ಶಿಬಿರ

ದಾವಣಗೆರೆ, ಸೆ.25-  ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆ  ಬರೆಯುವ ಮಹಿಳಾ ಅಭ್ಯರ್ಥಿಗಳಿಗಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ  ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ತಿಳಿಸಿದರು.

ಶಿಬಿರವು ಹರಿಹರದಲ್ಲಿ ಸೆ. 29ರಿಂದ ಅಕ್ಟೋಬರ್ 10ವರೆಗೆ ನಡೆಯಲಿದೆ ಎಂದು ಅವರು ಮಂಗಳವಾರ ಪತ್ರಿಕಾಗೋಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಾಡಿದ್ದು ದಿನಾಂಕ 27ರಂದು ಸಂಜೆ 6 ಗಂಟೆಗೆ ನಗರದ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ `ಬಾಬ್‌ಮಾರ್ಲಿ ಪ್ರಮ್ ಕೋಡಿಹಳ್ಳಿ’ ನಾಟಕ ಉಚಿತ ಪ್ರದರ್ಶನವನ್ನೂ ಆಯೋಜಿಸಲಾಗಿದೆ. 

ನಾಟಕವು ಕೆ.ಎನ್. ಹನುಮಂತಯ್ಯ, ಕೆ. ಚಂದ್ರಶೇಖರ್ ಪಠ್ಯದ ಆಕರವಾಗಿದ್ದು ಲಕ್ಷ್ಮಣ ಕೆ.ಸಿ. ರಚಿಸಿ, ನಿರ್ದೇಶಿಸಿದ್ದಾರೆ ಎಂದು ತಿಳಿಸಿದರು. ಉಭಯ ಸಂಘಟನೆಗಳ ಪ್ರಮುಖರಾದ ಹೆಗ್ಗೆರೆ ರಂಗಪ್ಪ, ಪವಿತ್ರಾ, ಕರೂರು ಹನುಮಂತಪ್ಪ, ಮಾಡಾಳು ಶಿವಕುಮಾರ್ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!