ಗಾಂಧೀಜಿ ಆಶಯದಂತೆ ಶಾಂತಿ ಪ್ರಿಯರಾಗೋಣ

ಗಾಂಧೀಜಿ ಆಶಯದಂತೆ ಶಾಂತಿ ಪ್ರಿಯರಾಗೋಣ

ಮಾನವೀಯತೆಗಾಗಿ ನಡೆದ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ

ದಾವಣಗೆರೆ, ಸೆ.25- ಗಾಂಧೀಜಿಯವರ ಆಶಯದಂತೆ `ಮಾನವೀಯತೆಗಾಗಿ ನಡೆ’ ಮೂಲಕ ನಾವೆಲ್ಲರೂ ಶಾಂತಿ ಪ್ರಿಯರಾಗೋಣ ಎಂದು ಜಿಲ್ಲಾಧಿಕಾರಿ ಹಾಗೂ ರೆಡ್ ಕ್ರಾಸ್ ಸೊಸೈಟಿಯ ಗೌರವಾಧ್ಯಕ್ಷ ಗಂಗಾಧರಸ್ವಾಮಿ ಜಿ.ಎಂ  ತಿಳಿಸಿದರು.

ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿಶ್ವ ಶಾಂತಿ ದಿನಾಚರಣೆ ಅಂಗವಾಗಿ ಇಂದು ಹಮ್ಮಿಕೊಳ್ಳಲಾಗಿದ್ದ ಮಾನವೀಯತೆಗಾಗಿ ನಡೆದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಗಾಂಧೀಜಿಯವರನ್ನು ಇಂದಿನ ದಿನಮಾನಗಳಲ್ಲಿ ಮತ್ತು ಮುಂದಿನ ದಿನಮಾನಗಳಲ್ಲಿ ಯಾಕೆ ಅವರು ಜೀವಂತವಾಗಿದ್ದಾರೆ ಎಂಬುದಕ್ಕೆ, ಇವತ್ತು ನಾವೆಲ್ಲರೂ ಸೇರಿ ಮಾಡುತ್ತಿರುವ ಶಾಂತಿ ನಡೆಯೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಈ ದಿನ ರಾಜ್ಯದ 31 ಜಿಲ್ಲೆಗಳಲ್ಲೂ ವಿಶ್ವ ಶಾಂತಿ ದಿನಾಚರಣೆ ಪ್ರಯುಕ್ತ ಮಾನವೀಯತೆಗಾಗಿ ನಡಿಗೆ ಜಾಥಾ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಜಾಥಾದಲ್ಲಿ ಅಶಾಂತಿ ತೊಲಗಿ, ಶಾಂತಿ ನೆಲೆಸಲಿ, ರಷ್ಯಾ – ಉಕ್ರೇನ್ ಯುದ್ಧ ನಿಲ್ಲಲಿ. ಬಾಂಗ್ಲಾ ದೇಶದಲ್ಲಿ ಶಾಂತಿ ನೆಲೆಸಲಿ, ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ನಿಲ್ಲಲಿ, ಮಾನವೀಯತೆಯಿಂದ ಮಾತ್ರ ವಿಶ್ವ ಶಾಂತಿ ಸಾಧ್ಯ ಎಂಬ ಘೋಷವಾಕ್ಯದೊಂದಿಗೆ ಜಾಥಾ ಸಾಗಿತು.

ಜಾಥಾದಲ್ಲಿ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಯಾದ ಎಂ.ವಿ.ಶಿವಕುಮಾರ್ ಹಾಗೂ ಕುಂದುವಾಡ ವಾಯುವಿಹಾರಿಗಳ ಬಳಗ, ಅಸಂಘಟಿತ ಕಾರ್ಮಿಕರ ಸಂಘ, ವಿ.ಎಸ್.ಪ್ಯಾರಾಮೆಡಿಕಲ್ ಕಾಲೇಜ್, ಎಂ.ಎಸ್.ವಿ ಕಾಲೇಜ್, ಮಾಕನೂರು ಮಲ್ಲೇಶಪ್ಪ ಕಾಲೇಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಡಿ.ಆರ್.ಎಂ ಕಾಲೇಜ್, ಜೈನ್ ಇಂಜಿನಿಯರಿಂಗ್ ಕಾಲೇಜು, ಸಿದ್ದಗಂಗಾ ಕಾಲೇಜ್, ಎಸ್.ಜೆ.ವಿ.ಪಿ ಕಾಲೇಜ್, ಎಂ.ಇ.ಎಸ್ ಕಾಲೇಜಿನ ವಿದ್ಯಾರ್ಥಿಗಳು, ರೆಡ್ ಕ್ರಾಸ್  ಸಿಬ್ಬಂದಿಗಳು ಇದ್ದರು.

error: Content is protected !!