ದಾವಣಗೆರೆ, ಸೆ. 17- ನಗರದ ಅಕ್ಕಮಹಾದೇವಿ ಸಮಾಜದ ನೇತ್ರದಾನ ಪ್ರೇರಣಾ ಸಮಿತಿಯಿಂದ ಮಹಾತ್ಮ ವಿದ್ಯಾಶಾಲೆಯ ಪ್ರೌಢಶಾಲೆ ಮಕ್ಕಳ ಕಣ್ಣಿನ ತಪಾಸಣೆ ನಡೆಸಲಾಗಿದ್ದು, ದಿನಾಂಕ 20ರಂದು ನಡೆಯುವ ಕಾರ್ಯಕ್ರಮದಲ್ಲಿ ಕನ್ನಡಕ ವಿತರಿಸಲಾಗುವುದು ಎಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸದಸ್ಯರು ಹಾಗೂ ಚಿಗಟೇರಿ ಆಸ್ಪತ್ರೆಯ ನೇತ್ರ ತಜ್ಞರು ಉಪಸ್ಥಿತರಿದ್ದರು.
ಮಹಾತ್ಮ ಶಾಲೆಯಲ್ಲಿ ಕಣ್ಣಿನ ತಪಾಸಣೆ
