ಹಿರಿಯ ಪತ್ರಕರ್ತ ತಾರಾನಾಥ್‌ಗೆ ರಾಷ್ಟ್ರೀಯ ವಿಶ್ವಕರ್ಮ ರತ್ನ ಪ್ರಶಸ್ತಿ

ಹಿರಿಯ ಪತ್ರಕರ್ತ ತಾರಾನಾಥ್‌ಗೆ  ರಾಷ್ಟ್ರೀಯ ವಿಶ್ವಕರ್ಮ ರತ್ನ ಪ್ರಶಸ್ತಿ

ದಾವಣಗೆರೆ, ಸೆ. 12 – ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಕ್ಕಾಗಿ ನಗರದ ಹಿರಿಯ ಪತ್ರಕರ್ತ ಎ.ಎಲ್. ತಾರಾನಾಥ್ ಅವರು ರಾಷ್ಟ್ರೀಯ ವಿಶ್ವಕರ್ಮ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದೇ ದಿನಾಂಕ 28 ರಂದು ನವದೆಹಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ಆಯೋಜನೆ ಮಾಡಿರುವ ರಾಷ್ಟ್ರ ಮಟ್ಟದ ವಿಶ್ವಕರ್ಮ ಸಮ್ಮೇಳನದಲ್ಲಿ ಪ್ರಶಸ್ತಿ ಪುರಸ್ಕಾರ ಮಾಡಲಾಗುವುದು. 

ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ದೇಶದ 25 ಜನರಿಗೆ ರಾಷ್ಟ್ರೀಯ ವಿಶ್ವಕರ್ಮ ರತ್ನ ಪ್ರಶಸ್ತಿ ಪುರಸ್ಕಾರ ಮಾಡಿ ಗೌರವಿಸಲಾಗುವುದು. ಎ.ಎಲ್. ತಾರಾನಾಥ್ ಸೇರಿದಂತೆ ರಾಜ್ಯದಿಂದ 8 ಜನ ಸಾಧಕರು ಆಯ್ಕೆ ಆಗಿದ್ದಾರೆ ಎಂದು ವಿಶ್ವಕರ್ಮ ಸಮ್ಮೆಳನದ ರಾಷ್ಟ್ರೀಯ ಅಧ್ಯಕ್ಷ ಮಾರುತಿ ಬಡಿಗೇರ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!