ಸಂತ ಪೌಲರ ಪಿಯು ಕಾಲೇಜಿನ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಂತ ಪೌಲರ ಪಿಯು ಕಾಲೇಜಿನ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ದಾವಣಗೆರೆ, ಸೆ.11- ಸಂತ ಪೌಲರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈಚೆಗೆ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆಯೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚೆಸ್‌ನಲ್ಲಿ ಸಿ.ಎನ್‌. ವೇದಶ್ರೀ (ಪ್ರಥಮ), 1500 ಮೀಟರ್‌ ಹಾಗೂ 3000 ಮೀಟರ್‌ ಓಟದಲ್ಲಿ ಸಿ. ಮಮತ (ಪ್ರಥಮ), ಗುಡ್ಡಗಾಡು ಓಟದಲ್ಲಿ (5ನೇ ಸ್ಥಾನ), 800 ಮೀ ಓಟದಲ್ಲಿ ಟಿ. ಮಾನಸ (ತೃತೀಯ), 3000 ಮೀ ಓಟದಲ್ಲಿ ಆರ್‌. ಸಿಂಧೂ (ದ್ವಿತೀಯ) ಸ್ಥಾನ ಪಡೆದಿದ್ದಾರೆ.

ವಾಕ್‌ ರೇಸ್‌ನಲ್ಲಿ ಆರ್‌. ಗೌತಮಿ (ಪ್ರಥಮ), ಹ್ಯಾಮರ್‌ ಥ್ರೋ ಸ್ಪರ್ಧೆಯಲ್ಲಿ ವಿ. ಪವಿತ್ರ (ಪ್ರಥಮ), ತ್ರಿಬಲ್‌ ಜಂಪ್‌ ಹಾಗೂ ಗುಡ್ಡಗಾಡು ಓಟದಲ್ಲಿ ಕೆ.ಎಸ್‌. ಗೀತಾಂಜಲಿ (ತೃತೀಯ),
ಗುಂಡು ಎಸೆತದಲ್ಲಿ ಎಸ್‌. ಜ್ಯೋತಿ (ದ್ವಿತೀಯ), 100ಮೀ ಹರ್ಡಲ್ಸ್‌ ಓಟದಲ್ಲಿ ಎಚ್‌. ಕಾವ್ಯ (ಪ್ರಥಮ), 400 ಮೀ ಹರ್ಡಲ್ಸ್‌ನಲ್ಲಿ ಪಿ. ಶ್ರೀನಿಧಿಗೆ ದ್ವಿತೀಯ ಸ್ಥಾನ ಲಭಿಸಿದೆ.

100 ಮೀ. ಹಾಗೂ 400 ಮೀ. ಹರ್ಡಲ್ಸ್‌ ಓಟದಲ್ಲಿ ಪಿ. ಭೂಮಿಕಾ (ತೃತೀಯ) ಓಪನ್‌ ಕರಾಟೆ ನ್ಯಾಷನಲ್‌ ಚಾಂಪಿಯನ್‌ ಶಿಪ್‌ ಸ್ಪರ್ಧೆಯಲ್ಲಿ ಆರ್‌.ಎಲ್‌. ಭುವನಾ ಪ್ರಥಮ ಸ್ಥಾನ ಪಡೆದಿದ್ದಾರೆ.

error: Content is protected !!