ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳಿಗೆ ಇಂದು ಜಿಲ್ಲಾಧಿಕಾರಿಗಳ ಭೇಟಿ

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಇಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೆ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿರುವುದಾಗಿ ತಹಶೀಲ್ದಾರ್ ಪಟ್ಟ ರಾಜೇಗೌಡರು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 8 ಗಂಟೆಗೆ ಹೊನ್ನಾಳಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ, 9ಕ್ಕೆ ನ್ಯಾಮತಿ ತಾಲ್ಲೂಕು ಬಸವನಹಳ್ಳಿ ಗ್ರಾಮದಲ್ಲಿ ಹಾನಿಯಾದ ಚಾನೆಲ್ ದುರಸ್ತಿ ಹಾಗೂ ಕಾಮಗಾರಿಯ ಪರಿಶೀಲನೆ, 10 ಗಂಟೆಗೆ ಶಿಕ್ಷಕರೊಂದಿಗೆ ಸಭೆ ನಡೆಸುವರು.

ಬೆಳಿಗ್ಗೆ 11 ಗಂಟೆಗೆ ಹೊನ್ನಾಳಿ ಸಾಮರ್ಥ್ಯ ಸೌಧದಲ್ಲಿ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆಯ ನಂತರ ಇತ್ತೀಚಿಗೆ ಮಳೆ ನೀರು ನುಗ್ಗಿ ರೋಗಿಗಳಿಗೆ ಆತಂಕ ನಿರ್ಮಾಣವಾಗಿದ್ದ ಸರ್ಕಾರಿ ಆಸ್ಪತ್ರೆಗೆ ಒಂದು ಗಂಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಧ್ಯಾಹ್ನದ ಊಟದ ನಂತರ 2 ಗಂಟೆಗೆ ಹೊನ್ನಾಳಿ ಪುರಸಭೆಗೆ ಸೇರಿದ್ದ ಮಲ್ಲದೇವರ ಕಟ್ಟಿಯ ನಿವೇ ಶನ ಪರಿಶೀಲನೆ ನಡೆಸಲಿರುವರು ಎಂಬುದಾಗಿ ತಹಶೀಲ್ದಾರ್ ತಿಳಿಸಿರುವರು.

error: Content is protected !!