ಆಸ್ತಿ ತೆರಿಗೆ – ಟಿಡಿಎಸ್ ಕುರಿತು ಇಂದು ನಗರದಲ್ಲಿ ಕಾರ್ಯಾಗಾರ

ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ಹಣಕಾಸು  ಕಾಯ್ದೆ 2024 ಮತ್ತು ಸಂಬಂಧಿತ ಆಸ್ತಿ ತೆರಿಗೆ – ಟಿಡಿಎಸ್ ಕುರಿತಂತೆ ವಿಚಾರಗೋಷ್ಠಿಯು ಚಾರ್ಟರ್ಡ್ ಅಂಕೌಂಟೆಂಟ್ ಭವನದಲ್ಲಿ ಇಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಟಿ. ಸುಧೀಂದ್ರರಾವ್ ತಿಳಿಸಿದ್ದಾರೆ. ಹಿರಿಯ ಲೆಕ್ಕಪರಿಶೋಧಕ ಸಚಿನ್ ಬಿ.ಪಾಟೀಲ್ (ಬೆಂಗಳೂರು)  ಮತ್ತು ಹಿರಿಯ ಲೆಕ್ಕಪರಿಶೋಧಕ ಹೇಮ ಸುಂದರ ರಾವ್ (ಬೆಂಗಳೂರು) ಅವರುಗಳು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಜಿ.ಮಹಾಂತೇಶ್ ವಿವರಿಸಿದ್ದಾರೆ.

error: Content is protected !!