ನಗರದಿಂದ ಶಿವಮೊಗ್ಗ, ಮಣಿಪಾಲ್‌ಗೆ ಹೆಚ್ಚುವರಿ ಬಸ್‌ಗಳಿಗೆ ಮನವಿ

ನಗರದಿಂದ ಶಿವಮೊಗ್ಗ, ಮಣಿಪಾಲ್‌ಗೆ ಹೆಚ್ಚುವರಿ ಬಸ್‌ಗಳಿಗೆ ಮನವಿ

ದಾವಣಗೆರೆ, ಆ. 29- ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಪ್ರತಿಷ್ಠಾನದ ಅಧ್ಯಕ್ಷ ಹೆಚ್. ಜಯಣ್ಣ ಅವರ ಅಧ್ಯಕ್ಷತೆಯಲ್ಲಿ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಸಂಚರಿಸಲು ಕೆ.ಎಸ್.ಆರ್.ಟಿ.ಸಿ. ಬಸ್‌ಗಳ ಕೊರತೆ ಹಾಗೂ ದಾವಣಗೆರೆಯಿಂದ ಶಿವಮೊಗ್ಗ, ಮಣಿಪಾಲ್‌ಗೆ ಹೆಚ್ಚುವರಿ ಬಸ್ ಬಿಡಬೇಕೆಂದು ಒತ್ತಾಯಿಸಿ ಸಚಿವ ಎಸ್. ಮಲ್ಲಿಕಾರ್ಜುನ್ ಹಾಗೂ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಫಕೃದ್ದೀನ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕಾಯಿಪೇಟೆ ಹಾಲೇಶ್, ನಿರ್ದೇಶಕರಾದ ಅಕ್ಕಿ ರಾಮಚಂದ್ರ, ಪ್ರಶಾಂತ ಶೆಟ್ರು ಅಣಜಿ, ಚರಂತಿಮಠ, ಬಸವಕುಮಾರ್ ಪೂಜಾರ್, ಬಿ.ವಿ. ರಾಜಶೇಖರ್, ಡಾ. ಗಂಗಾಧರ್, ಮಲ್ಲಿಕಾರ್ಜುನ್ ಕಟ್ಟಿಮನಿ, ವಿ. ಶಿವಮೂರ್ತಿ ಸ್ವಾಮಿ, ಡೋಲಿ ಚಂದ್ರು ಉಪಸ್ಥಿತರಿದ್ದರು.

error: Content is protected !!