ಲೈಂಗಿಕ ದೌರ್ಜನ್ಯ ತಡೆ ಎಲ್ಲರ ಆದ್ಯ ಕರ್ತವ್ಯ

ಲೈಂಗಿಕ ದೌರ್ಜನ್ಯ ತಡೆ ಎಲ್ಲರ ಆದ್ಯ ಕರ್ತವ್ಯ

ಹರಪನಹಳ್ಳಿ ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್

ಹರಪನಹಳ್ಳಿ, ಆ. 28- ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವುದು ಎಲ್ಲರ ಆದ್ಯ ಕರ್ತವ್ಯ ಎಂದು ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ಹೇಳಿದರು.

ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ  ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಕೆ.ಬಿ.ಜಿ. ಪ್ರೌಢಶಾಲೆ  ಸಂಯುಕ್ತಾಶ್ರಯದಲ್ಲಿ ಜರುಗಿದ `ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆ- 2012 ಹಾಗೂ ಬಾಲ್ಯವಿವಾಹ ನಿಷೇಧ ಕಾಯಿದೆ- 2006′ ಕುರಿತು ಹಮ್ಮಿಕೊಳ್ಳಲಾಗಿದ್ದ  ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು ವಿದ್ಯಾರ್ಥಿಗಳು  ಬಾಲ್ಯವಿವಾಹವಾಗಿ    ಮುಂದಿನ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಕಾನೂನಿನ ಚೌಕಟ್ಟಿನಲ್ಲಿ ವಿವಾಹ ಆಗುವುದು ಉತ್ತಮ. ಮಹಿಳೆ ಯರೊಂದಿಗೆ ಅಸಭ್ಯವಾಗಿ ವರ್ತಿಸುವುದು,  ಮಾತನಾಡುವುದು ಮತ್ತು  ನೋಡುವುದರಿಂದಲೂ ಸಹ ಲೈಂಗಿಕ ಅಪರಾಧವಾಗುತ್ತದೆ  ಎಂದು ತಿಳಿ ಹೇಳಿದರು.

ಪ್ಯಾನಲ್ ವಕೀಲ ಎಂ.ಮೃತ್ಯುಂಜಯ ಮಾತನಾಡಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಕಾನೂನಿನಲ್ಲಿ ಅನೇಕ ಕಾಯ್ದೆಗ ಳಿವೆ. ಸ್ವಾತಂತ್ರ ಪೂರ್ವದಿಂದಲೂ ಇಂತಹ ಕಾನೂನು ಜಾರಿ ಯಲ್ಲಿವೆ. ಆದರೂ ಅಂದಿನಿಂದ ಇಂದಿನವರೆಗೂ ಮಕ್ಕಳ ಮೇಲೆ ಲೈಂಗಿಕ ಚಟುವಟಿಕೆ ನಡೆಯುತ್ತಲೇ ಇವೆ. ಇಂತಹ ಕೃತ್ಯವನ್ನು ತಡೆಗಟ್ಟಲು   ಸಂವಿಧಾನದಿಂದ ಮಾತ್ರ ಸಾಧ್ಯ ಎಂದರು.

ಪ್ಯಾನಲ್ ವಕೀಲ  ಕೆ.ಸಣ್ಣನಿಂಗನಗೌಡ ಮಾತನಾಡಿ, ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯ ನಡೆದಾಗ ಅಂತಹ ಘಟನೆಗೆ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ.   ಕಾನೂನಿನ ಚೌಕಟ್ಟಿನಲ್ಲಿ ನಡೆದಾಗ ಮಾತ್ರ ಉತ್ತಮ ಪ್ರಜೆಗಳಾಗಿ ಬಾಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.

 ಈ ಸಂದರ್ಭದಲ್ಲಿ  ಕೆ.ಬಿ.ಜಿ.ಪ್ರೌಢಶಾಲೆಯ ಅಧ್ಯಕ್ಷ ಸಿ.ಸಿದ್ದಪ್ಪ,  ಮುಖ್ಯಶಿಕ್ಷಕ ಶಂಕರ್ ಮೂರ್ತಿ, ಮಾತನಾಡಿದರು. ವಕೀಲರಾದ  ಬಿ. ತಿಪ್ಪೇಶ್ ಮತ್ತು ನಾಗರಾಜ್ ನಾಯ್ಕ ಸಿ.,   ಬಸವರಾಜ್  ಮತ್ತಿತರರು ಹಾಜರಿದ್ದರು.

error: Content is protected !!