ರಾಜ್ಯಪಾಲ ಹುದ್ದೆ ರದ್ದುಗೊಳಿಸುವಂತೆ ಸಿಪಿಐನಿಂದ ಇಂದು ಪ್ರತಿಭಟನೆ

ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ರಾಜ್ಯಪಾಲರ ನಡೆ ವಿರೋಧಿಸಿ ರಾಜ್ಯಪಾಲ ಹುದ್ದೆ ರದ್ದುಗೊಳಿಸುಂತೆ ದಾವಣಗೆರೆ ಉಪವಿಭಾಗಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿಯವರಿಗೆ ನಾಳೆ ಬೆಳಗ್ಗೆ 11-30 ಕ್ಕೆ ಸಿಪಿಐ ಕಚೇರಿಯಿಂದ ಹೊರಟು ಗಾಂಧಿ ಸರ್ಕಲ್ ಪಿಬಿ ರಸ್ತೆ ಮೂಲಕ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ತಿಳಿಸಿದ್ದಾರೆ.

error: Content is protected !!