ದೇಶ ಸೇವೆಯ ಮನೋಭಾವ ರೂಢಿಸಿಕೊಳ್ಳಬೇಕು

ದೇಶ ಸೇವೆಯ ಮನೋಭಾವ ರೂಢಿಸಿಕೊಳ್ಳಬೇಕು

ಕುಂಬಳೂರಿನ ಕಾರ್ಯಕ್ರಮದಲ್ಲಿ ವೃತ್ತ ಯೋಧ ರವಿಕುಮಾರ್‌

ಹರಿಹರ, ಆ. 26 – ಯುವಕರು ಸ್ವಂತಿಕೆ ಬೆಳೆಸಿಕೊಳ್ಳುವ ಜತೆಗೆ ಸಮಾಜ ಹಾಗೂ ದೇಶ ಸೇವೆ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಯೋಧ ರವಿಕುಮಾರ್‌ ಹೇಳಿದರು.

ತಾಲ್ಲೂಕಿನ ಕುಂಬಳೂರು ಗ್ರಾಮದ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಈಚೆಗೆ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ದೇಶವು ಸುಸಂಸ್ಕೃತ ನಾಗರಿಕರನ್ನು ಬಯಸುವುದರಿಂದ ನಾವು ಶಿಕ್ಷಣದ ಜತೆಗೆ ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳ ದೇಶ ಭಕ್ತಿ ಬಿಂಬಿಸುವ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಸಂಸ್ಥೆಯ ಅಧ್ಯಕ್ಷ ರಮೇಶ್ ಬಿ ಚಿಟ್ಟಕ್ಕಿ, ಆಡಳಿತಾಧಿಕಾರಿ ಎಸ್‌.ಕೆ. ಕುಮಾರ್, ಪ್ರಗತಿಪರ ರೈತ ಶೇಖರಪ್ಪ ಮಲ್ಲನಾಯಕನಹಳ್ಳಿ, ಪ್ರಾಚಾರ್ಯ ಚೇತನ್ ಕುಮಾರ್, ಉಪ ಪ್ರಾಚಾರ್ಯೆ ಅಖಿಲೇಶ್ವರಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.

error: Content is protected !!