ಶ್ರೀ ಕ್ಷೇತ್ರ ಆನೆಕೊಂಡದಲ್ಲಿ ಇಂದು ಬಸವೇಶ್ವರ ಸ್ವಾಮಿ ಕಾರಣಿಕ, ಜಾತ್ರೆ

ಶ್ರೀ ಕ್ಷೇತ್ರ ಆನೆಕೊಂಡದಲ್ಲಿ ಇಂದು ಬಸವೇಶ್ವರ ಸ್ವಾಮಿ ಕಾರಣಿಕ, ಜಾತ್ರೆ

ಸಮೀಪದ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವವು ಇಂದು ಶ್ರಾವಣದ ಕಡೇ ಸೋಮವಾರ ನಡೆಯಲಿದೆ. ಇಂದು ಸಂಜೆ 4 ಗಂಟೆಯಿಂದ ಶ್ರೀ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಮತ್ತು ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಹಾಗೂ ನಿಟ್ಟುವಳ್ಳಿ ಶ್ರೀ ದುರ್ಗಾಂಬಿಕಾದೇವಿ ಹಾಗೂ ಸುತ್ತ ಮುತ್ತಲಿನ ಗ್ರಾಮದ ದೇವರುಗಳ ನ್ನೊಳ ಗೂಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ಸಂಚರಿಸಿ ಸಂಜೆ 6 ಗಂಟೆಗೆ ಕಾರಣಿಕ ನಡೆಯಲಿದೆ ಎಂದು ಶ್ರೀ ಬಸವೇಶ್ವರ ದೇವಸ್ಥಾನದ ಕನ್ವೀನರ್‌ ಗೌಡ್ರ ಅಜ್ಜಪ್ಪ ತಿಳಿಸಿದ್ದಾರೆ.

error: Content is protected !!