ಬಾಲಕರ ಬಾಲ್‌ಬ್ಯಾಡ್‌ಮಿಂಟನ್ ವಿಶ್ವಚೇತನ ಪ. ಪೂ. ಕಾಲೇಜು ತಾಲ್ಲೂಕಿಗೆ ದ್ವಿತೀಯ

ಬಾಲಕರ ಬಾಲ್‌ಬ್ಯಾಡ್‌ಮಿಂಟನ್ ವಿಶ್ವಚೇತನ ಪ. ಪೂ. ಕಾಲೇಜು ತಾಲ್ಲೂಕಿಗೆ ದ್ವಿತೀಯ

ದಾವಣಗೆರೆ, ಆ. 25-ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಬಾಲಕರ ಬಾಲ್‌ಬ್ಯಾಡ್‌ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾಗಿ ದಾವಣಗೆರೆ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಡಿ.ಹು. ಸುಮೀತ್, ಹೆಚ್.ದೊರೆತೀರ್ಥರಾಜ್ ಮತ್ತು ಬಿ.ಎಲ್. ರುದ್ರೇಶ್ ಇವರುಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಕಾಲೇಜು ಸಂಸ್ಥಾಪಕ ಅಧ್ಯಕ್ಷರಾದ ಡಾ. ವಿಜಯಲಕ್ಷ್ಮಿ ವೀರಚಮಾನೇನಿ, ಪ್ರಾಂಶುಪಾಲ ಜಿ. ವಿನೋದ್, ದೈಹಿಕ ಶಿಕ್ಷಕ ಚೌಡಪ್ಪ, ನಟರಾಜ್  ಅಭಿನಂದಿಸಿದ್ದಾರೆ.

error: Content is protected !!