ನಗರದಲ್ಲಿ ಇಂದು ದೇವನಗರಿ ಪ್ರೊ ಇಮೇಜ್-2024 ಪ್ರದರ್ಶನ

ದಾವಣಗೆರೆ, ಆ. 23 – ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘ ಹಾಗೂ ಫೋಟೋಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 24 ಹಾಗೂ 25ರಂದು ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ `ದೇವನಗರಿ ಪ್ರೊ ಇಮೇಜ್-2024′ ಪ್ರದರ್ಶನ ಹಾಗೂ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಸಮಾರಂಭ ಏರ್ಪಡಿಸಲಾಗಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ ಮಾತನಾಡಿ, ನಾಳೆ ದಿನಾಂಕ 24ರಂದು ಬೆಳಗ್ಗೆ 11.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಶಿವಗಂಗಾ ಬಸವರಾಜು, ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ವಿಜಯ್ ಜಾಧವ್, ಶಿವಮೊಗ್ಗದ ಕೆ.ಟಿ. ಶ್ರೀನಿವಾಸ್, ಹಾವೇರಿಯ ರಾಜೇಂದ್ರ ರಿತ್ತಿ, ಗದಗದ ಪವನ್ ಕೆ. ಮೆಹರವಾಡೆ, ಚಿತ್ರದುರ್ಗದ ಸೈಯ್ಯದ್ ರಹಮತ್‌ವುಲ್ಲಾ, ವಿಜಯನಗರದ ಕೆ.ರಾಮಣ್ಣ, ಕೊಪ್ಪಳದ ವಿಜಯಕುಮಾರ್ ವಸ್ತ್ರದ್ ಭಾಗವಹಿಸುವರು. 

ಅಂದೇ ಸಂಜೆ 5.30ಕ್ಕೆ ನಡೆಯುವ ಛಾಯಾಸಾಧಕರಿಗೆ ಸನ್ಮಾನ ಮತ್ತು ಛಾಯಾಗ್ರಾಹಕರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯ ಕೆ.ಪ್ರಸನ್ನಕುಮಾರ್, ಎಸ್.ಆರ್ ತಿಪ್ಪೇಸ್ವಾಮಿ, ಎಸ್.ದುಗ್ಗಪ್ಪ ಪಾಲ್ಗೊಳ್ಳವರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ವಿಜಯ ಜಾಧವ್, ಎಚ್.ಕೆ.ಸಿ ರಾಜು, ಎಸ್.ದುಗ್ಗಪ್ಪ, ಎನ್.ಮಲ್ಲಿಕಾರ್ಜುನ್, ಬಿ.ಎಂ. ತಿಪ್ಪೇಸ್ವಾಮಿ, ತಿಲಕ್, ಶಂಭಣ್ಣ, ಕೆ.ಪಿ. ನಾಗರಾಜ್, ಮಿಥುನ್, ಅರುಣ್ ಕುಮಾರ್, ಕೊಟ್ರೇಶ್, ಪ್ರಕಾಶ್, ಕಿಶೋರ್, ಮಹಾಂತೇಶ್ ಇತರರು ಇದ್ದರು.

error: Content is protected !!