ಶ್ರೀ ಕ್ಷೇತ್ರ ಆನೆಕೊಂಡದಲ್ಲಿ ನಾಡಿದ್ದು ಬಸವೇಶ್ವರ ಸ್ವಾಮಿ ಕಾರಣಿಕ, ಜಾತ್ರೆ

ಶ್ರೀ ಕ್ಷೇತ್ರ ಆನೆಕೊಂಡದಲ್ಲಿ ನಾಡಿದ್ದು  ಬಸವೇಶ್ವರ ಸ್ವಾಮಿ ಕಾರಣಿಕ, ಜಾತ್ರೆ

ದಾವಣಗೆರೆ, ಆ. 23 – ಸಮೀಪದ ಆನೆಕೆೋಂಡದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವವು ಇದೇ ದಿನಾಂಕ 26ರ ಶ್ರಾವಣದ ಕಡೇ ಸೋಮವಾರ ನಡೆಯಲಿದೆ.  ಅಂದು ಸಂಜೆ 4 ಗಂಟೆಯಿಂದ ಶ್ರೀ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಮತ್ತು ನೀಲನಹಳ್ಳಿ ಶ್ರೀ ಆಂಜನೇಯಸ್ವಾಮಿ ಹಾಗೂ ನಿಟ್ಟುವಳ್ಳಿ ಶ್ರೀ ದುರ್ಗಾಂಬಿಕಾದೇವಿ ಹಾಗೂ ಸುತ್ತಮುತ್ತಲಿನ ಗ್ರಾಮದ ದೇವರುಗಳನ್ನೊಳ ಗೂಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ಸಂಚರಿಸಿ ಸಂಜೆ 6 ಗಂಟೆಗೆ ಕಾರಣಿಕ ನಡೆಯಲಿದೆ ಎಂದು ಶ್ರೀ ಬಸವೇಶ್ವರ ದೇವಸ್ಥಾನದ ಕನ್ವೀನರ್‌ ಗೌಡ್ರ ಅಜ್ಜಪ್ಪ ತಿಳಿಸಿದ್ದಾರೆ.

error: Content is protected !!