ಭದ್ರೆಗೆ ಬಾಗಿನ ಅರ್ಪಿಸಿದ ನಂದಿಗುಡಿ ಶ್ರೀಗಳು

ಭದ್ರೆಗೆ ಬಾಗಿನ ಅರ್ಪಿಸಿದ ನಂದಿಗುಡಿ ಶ್ರೀಗಳು

ಮಲೇಬೆನ್ನೂರು, ಆ. 21- ಭದ್ರಾ ಜಲಾಶಯಕ್ಕೆ ಬುಧವಾರ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ದಾವಣಗೆರೆ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳ ಭಕ್ತರೊಂದಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

ಈ ವೇಳೆ ಮಾತನಾಡಿದ ಶ್ರೀಗಳು, ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯವು ಪ್ರತಿ ವರ್ಷ ಭರ್ತಿಯಾಗುವ ಮೂಲಕ ರೈತರನ್ನು ಸಮೃದ್ಧಿಗೊಳಿಸಲೆಂದು ಶುಭ ಹಾರೈಸಿದರು.

ಲಯನ್ಸ್ ಮಾಜಿ ಗೌರ್ನರ್ ಹಾಗೂ ನಂದಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರೂ ಆದ ಡಾ. ಟಿ. ಬಸವರಾಜ್ ಮಾತನಾಡಿ, ಭದ್ರೆ ನಮ್ಮೆಲ್ಲರನ್ನು ಸುಭದ್ರವಾಗಿ ಸದಾ ಕಾಲ ನೋಡಿಕೊಳ್ಳುತ್ತಾಳೆ ಎಂದರು. ಜಿ.ಪಂ. ಮಾಜಿ ಸದಸ್ಯ ನೇಮಿಚಂದ್ರಪ್ಪ, ತಾಲ್ಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಬಂಡೇರ ತಿಮ್ಮಣ್ಣ, ಮುಖಂಡ ಹಿಂಡಸಘಟ್ಟ ಮುರುಗೇಶಪ್ಪ, ಶಿವಮೊಗ್ಗ ನಂದಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಿ.ಬಿ. ಶಂಕ್ರಪ್ಪ, ಕುಕ್ಕುವಾಡ ಜಗದೀಶ್, ವಾಸನದ ಭೋಜರಾಜ್, ನಂದಿಗುಡಿಯ ಕರಿಬಸಪ್ಪ, ಚಂದ್ರಪ್ಪ, ಮೂಗಿನಗೊಂದಿಯ ಪಟೇಲ್ ಈಶ್ವರಪ್ಪ, ಮಲ್ಲಪ್ಪ, ಕೊಕ್ಕನೂರಿನ ಕೆ.ಪಿ. ಆಂಜನೇಯ ಪಾಟೀಲ್, ಮಠದ ವ್ಯವಸ್ಥಾಪಕ ಬೇವಿನಹಳ್ಳಿ ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು. 

error: Content is protected !!