ನಗರದಲ್ಲಿ ಇಂದಿನಿಂದ ರಾಯರ ಆರಾಧನೆ

ನಗರದಲ್ಲಿ ಇಂದಿನಿಂದ ರಾಯರ ಆರಾಧನೆ

ಕೆ.ಬಿ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರಾಯರ ಆರಾಧನಾ ಮಹೋತ್ಸವ ನಡೆಯಲಿದೆ.

ಇಂದು ಶ್ರೀ ಗುರು ರಾಯರ ಪೂರ್ವಾ ರಾಧನೆ ನಡೆಯಲಿದ್ದು, ಸಂಜೆ 7 ರಿಂದ ನಮನ ಅಕಾಡೆಮಿಯ ಮಾಧವಿ ಗೋಪಾಲಕೃಷ್ಣ ಮತ್ತು ಶಿಷ್ಯ ವೃಂದದಿಂದ ಭರತನಾಟ್ಯ ಪ್ರದರ್ಶನವಿದೆ. ನಾಳೆ ಬುಧವಾರ ಮಧ್ಯಾರಾಧನೆ ಪ್ರಯುಕ್ತ ಸಂಜೆ 6 ರಿಂದ ರಥೋತ್ಸವ, ಅಷ್ಟಾವಧಾನ, 7 ರಿಂದ ಸಂಜೀವ ಜೋಶಿ ಮತ್ತು ತಂಡದವರಿಂದ ಹರಿದಾಸವಾಣಿ ಆಯೋಜಿಸಲಾಗಿದೆ.

ನಾಡಿದ್ದು ದಿನಾಂಕ 22ರ ಗುರುವಾರ ಉತ್ತರಾಧನೆ ಪ್ರಯುಕ್ತ ಬೆಳಿಗ್ಗೆ 10.30 ರಿಂದ ಶ್ರೀ ಮಂತ್ರಾಲಯ ಪ್ರಭುಗಳು ರಚಿಸಿರುವ ಶ್ರೀ ಮನ್ಯಾಯ ಸುಧಾ ಪರಿಮಳ ಗ್ರಂಥದೊಂದಿಗೆ ಶ್ರೀ ಗುರು ಸಾರ್ವಭೌಮರ ಮಹಾರಥೋತ್ಸವ ಜರುಗಲಿದೆ. ನಂತರ ಸಂಜೆ 6ಕ್ಕೆ ಶುಭದಾ ಮತ್ತು ತಂಡದ 30 ಜನರಿಂದ ವೀಣಾವಾದನ ನಡೆಯಲಿದೆ ಎಂದು ಶ್ರೀ ಗುರುರಾಜ ಸೇವಾ ಸಂಘದ ಪ್ರಕಟಣೆ ತಿಳಿಸಿದೆ.

error: Content is protected !!