ನೂಲು ಹುಣ್ಣಿಮೆ : ಶಾರದಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ

ನೂಲು ಹುಣ್ಣಿಮೆ : ಶಾರದಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ

ದಾವಣಗೆರೆ, ಆ. 19- ನಗರದ ಶ್ರೀ ಶಂಕರ ಸೇವಾ ಸಂಘದಿಂದ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ನೂಲು ಹುಣ್ಣಿಮೆ ಪ್ರಯುಕ್ತ ಉಪಾಕರ್ಮದಲ್ಲಿ ವೇದಬ್ರಹ್ಮ ಶ್ರೀ ಶಂಕರನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಮತ್ತು ಅವರ  ಶಿಷ್ಯವೃಂದ ಜೆ. ಎಂ. ಪುಟ್ಟಸ್ವಾಮಿ, ವಸಂತ ಕುಲಕರ್ಣಿ, ರಾಮಕೃಷ್ಣರಾವ್ ಮತ್ತು ಋಗ್ವೇದ ಮತ್ತು ಯಜುರ್ವೇದ ಉಪಕರ್ಮವನ್ನು ಹರಿಹರದ ರಾಜಶೇಖರ ಮುದ್ರಿ ಮತ್ತು ಇತರರು ನಡೆಸಿಕೊಟ್ಟರು.

50ಕ್ಕೂ ಹೆಚ್ಚು ವಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ  ಡಾ. ಬಿ.ಟಿ ಅಚ್ಯುತ್‌, ಉಪಾಧ್ಯಕ್ಷ ಗಿರೀಶ್ ನಾಡಿಗ್, ಕಾರ್ಯದರ್ಶಿ ಶ್ರೀನಿವಾಸ್ ಜೋಶಿ, ಲೆಕ್ಕ ಪರಿಶೋಧಕ ವಿನಾಯಕ ಜೋಶಿ ಟಿ.ಎಚ್., ಸುಬ್ರಹ್ಮಣ್ಯ, ವ್ಯವಸ್ಥಾಪಕ ಜಿ.ಎನ್. ರಮೇಶ್ ಹಾಗೂ ದೇವಸ್ಥಾನದ ಪುರೋಹಿತರು ಉಪಸ್ಥಿತರಿದ್ದರು.

error: Content is protected !!