ನಗರದ ಮಾಗಿ ಕುಟುಂಬದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಕಿ ಸಮರ್ಪಣೆ

ನಗರದ ಮಾಗಿ ಕುಟುಂಬದಿಂದ  ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಕಿ ಸಮರ್ಪಣೆ

ದಾವಣಗೆರೆ, ಜು. 30- ದಿ. ಶ್ರೀಮತಿ ಬಸಮ್ಮ ಶ್ರೀ ವೀರಬಸಪ್ಪ ಮಾಗಿ ಕುಟುಂಬದ ವತಿಯಿಂದ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಗೆ ನಾಲ್ಕನೇ ವರ್ಷ ಒಂದು ಲೋಡ್ ಅಕ್ಕಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮಾಗಿ ಹಾಗೂ ಶ್ರೀಮತಿ ದಾನೇಶ್ವರಿ ಮಾಗಿ ದಂಪತಿ,  ಕೈಲಾಶ್ ಬಾಬು ಶ್ರೀಮತಿ ರೂಪ ದಂಪತಿ ಅವರು  ಹಳೇ ಪೇಟೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಪೂಜೆ ಸಲ್ಲಿಸಿ ಧರ್ಮಸ್ಥಳಕ್ಕೆ ಭಕ್ತಿ ಸಮರ್ಪಸಲು ತೆರಳಿದರು.

ಈ ಲಾರಿಗೆ ಮಾಜಿ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ರಾಜ್ಯ ಬಿಜೆಪಿ ಎಸ್ಟಿ ಮೊರ್ಚಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ, ಮಾಜಿ ಮೇಯರ್ ಅಶ್ವಿನಿ ಪ್ರಶಾಂತ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್,  ವಿನಾಯಕ ಮಿಲ್ ವಿ. ಸಿದ್ದೇಶ್. ಎಸ್. ರಾಜೇಶ್, ಜಿ.ಬಿ. ಉಮೇಶ್,  ಬಿ.ಪಿ.ಎಂ.  ಜಗದೀಶ್, ಬಿ.ಪಿ.ಎಂ. ಮಂಜುನಾಥ್, ವಿನಾಯಕ ಬ್ಯಾಡಗಿ, ಜಯರಾಜ್ ಮೇಟಿ, ಪ್ರಕಾಶ್ ಮೇಟಿ, ಎಂ.ವೈ. ಆನಂದ, ಸಂಗಮೇಶ ಗದಗ, ಅಶೋಕ ಇಂಜಿನಿಯರ್, ಆರ್.ಎಂ ಪಂಚಾಕ್ಷರಿ, ಪರುಶುರಾಮ್ ಪಿ.ಎಸ್. ಸತೀಶ್ ಹುಬ್ಬಳ್ಳಿ, ನಿಖಿಲ್ ಮಾಗಿ, ಹರ್ಷ ಮಾಗಿ ಮತ್ತಿತರರು  ಉಪಸ್ಥಿತರಿದ್ದರು.

error: Content is protected !!