ಕೋಡಿ ಕ್ಯಾಂಪ್‌ ಕೊಟ್ಟೂರೇಶ್ವರ ಮಠ : ಶ್ರಾವಣದ 1 ತಿಂಗಳು ಅಭಿಷೇಕ ಪೂಜೆ

ಕೋಡಿ ಕ್ಯಾಂಪ್‌ ಕೊಟ್ಟೂರೇಶ್ವರ ಮಠ :  ಶ್ರಾವಣದ 1 ತಿಂಗಳು ಅಭಿಷೇಕ ಪೂಜೆ

ದಾವಣಗೆರೆ, ಜು. 29 – ನಗರದ ಕೊಟ್ಟೂರು ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ  ಟ್ರಸ್ಟ್‌ ಸಮಿತಿಯಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್‌ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಪಾದಗಳಿಗೆ ಆಗಸ್ಟ್‌ 5ರ ಸೋಮವಾರದಿಂದ ಒಂದು ತಿಂಗಳ ಕಾಲ ಅಭಿಷೇಕ – ಪೂಜೆ ಏರ್ಪಡಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 7 ರಿಂದ 9ರ ವರೆಗೆ ಅಭಿಷೇಕ, ಪೂಜೆ ನಡೆಯಲಿದೆ. ಅಭಿಷೇಕ, ಪೂಜೆಗೆ ರೂ. 500ಗಳ ದೇಣಿಗೆ ಸಲ್ಲಿಸಿ, ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.

ದಾಸೋಹ ಮನೆ ಮತ್ತು ಸಭಾಂಗಣ ಕಟ್ಟಡವು ಪ್ರಗತಿಯಲ್ಲಿದೆ. ಭಕ್ತಾದಿಗಳು ದೇಣಿಗೆ ಸಲ್ಲಿಸಲು ಕೋರಿದೆ.

ವಿವರಕ್ಕೆ ದೇವಸ್ಥಾನದ ಅರ್ಚಕ ಶ್ರೀ ಶಿವಕುಮಾರ ಹಿರೇಮಠ, (93537 29170, 98446 47056) ಸಂಪರ್ಕಿಸಬೇಕೆಂದು ದೇವಸ್ಥಾನ ಸಮಿತಿಯ ಕಣಕುಪ್ಪಿ  ಮುರುಗೇಶಪ್ಪ (96118 89151), ಟಿ.ಜಿ. ಬಕ್ಕೇಶಪ್ಪ (91089 88898), ಬಿ. ಚಿದಾನಂದಪ್ಪ (98445 28449) ಮಲ್ಲಾಬಾದಿ ಗುರುಬಸವರಾಜ (79757 97079) ತಿಳಿಸಿದ್ದಾರೆ.

error: Content is protected !!