ನಗರದಲ್ಲಿ ಇಂದು ಧರ್ಮಸ್ಥಳ ಸನ್ನಿಧಿಗೆ ಅಕ್ಕಿ ಸಮರ್ಪಣೆ

ದಿ|| ಶ್ರೀಮತಿ ಬಸಮ್ಮ ಮತ್ತು ದಿ. ವೀರಬಸಪ್ಪ ಮಾಗಿ ಕುಟುಂಬದ ವತಿಯಿಂದ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಅಕ್ಕಿ ಸಮರ್ಪಿಸುವ ಕಾರ್ಯಕ್ರಮವು ಪ್ರತಿ ವರ್ಷದಂತೆ ಈ ವರ್ಷವೂ ಇಂದು ನಡೆಯಲಿದೆ. ಮಾಗಿ ಕುಟುಂಬದಿಂದ 443 ಪ್ಯಾಕೆಟ್ ಅಕ್ಕಿಯನ್ನು ಮಕ್ಕಳಾದ ಕೈಲಾಶ್‌ಬಾಬು ಮಾಗಿ ಶ್ರೀಮತಿ ರೂಪಾ ಹಾಗೂ ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷ ಎಂ.ವಿ. ಜಯಪ್ರಕಾಶ್ ಮಾಗಿ ಶ್ರೀಮತಿ ದಾನೇಶ್ವರಿ ಅವರು ಹಾಗೂ ಸ್ನೇಹಿತರು, ಬಂಧು-ಮಿತ್ರರಿಂದ 421 ಪ್ಯಾಕೆಟ್ ಅಕ್ಕಿಯನ್ನು ಇಂದು ಬೆಳಿಗ್ಗೆ  7.30ಕ್ಕೆ ಹಳೇಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಲು ಧರ್ಮಸ್ಥಳಕ್ಕೆ ತೆರಳಲಾಗುವುದು.

ಜಯಪ್ರಕಾಶ್ ಮಾಗಿ ಅವರ ವತಿಯಿಂದ ಸ್ನೇಹಿತರು, ಬಂಧು-ಮಿತ್ರ ರಿಗೆ 2 ಬಸ್‌ಗಳ ಮೂಲಕ ತೆರಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮಾಡಿಸಲಾಗುವುದು ಎಂದು ಜಯಪ್ರಕಾಶ್ ಮಾಗಿ ತಿಳಿಸಿದ್ದಾರೆ.

error: Content is protected !!