ಪತ್ನಿ ಮೇಲೆ ಹಲ್ಲೆ, ಜೀವ ಬೆದರಿಕೆ ಹೊನ್ನಾಳಿ ಠಾಣೆ ಸಿಬ್ಬಂದಿ ಅಮಾನತ್ತು

ಹೊನ್ನಾಳಿ, ಜು. 28 –  ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿ, ಹೆಂಡತಿಯನ್ನು ನಿರ್ಲಕ್ಷಿಸಿ, ಆಕೆಯ ಮೇಲೆ ಹಲ್ಲೆ ಮಾಡಿದ್ದ ದೂರಿನ ಹಿನ್ನೆಲೆಯಲ್ಲಿ ಹೊನ್ನಾಳಿ ಪೊಲೀಸ್ ಠಾಣೆ ಸಿಬ್ಬಂದಿ ಟಿ. ಪ್ರಸನ್ನ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.

ಪತ್ನಿ ಆ‌ರ್. ಮಾಲಾ ಅವರು ಪ್ರಸನ್ನ ಅವರಿಂದ ತಮಗೆ ಆಗುತ್ತಿರುವ ತೊಂದರೆ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದರು.

ಪ್ರಸನ್ನ ಸರಿಯಾಗಿ ಮನೆಗೆ ಬರುತ್ತಿಲ್ಲ. ಮನೆಗೆ ಯಾವುದೇ ರೀತಿಯ ಹಣದ ಸಹಾಯ ಮಾಡುತ್ತಿಲ್ಲ. ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. 

ಈ ಬಗ್ಗೆ ಕೇಳಿದರೆ ನನ್ನ ಮೇಲೆ ಹಲ್ಲೆ ನಡೆಸಿ, ಕಬ್ಬಿಣದ ಬೀಗದಿಂದ ತಲೆಗೆ ಹೊಲಿಗೆ ಬೀಳುವ ರೀತಿ ಹೊಡೆದಿದ್ದಾರೆ. ಅಲ್ಲದೇ, ಸಾಯಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಂದು ಮಾಲಾ ದೂರು ಅರ್ಜಿಯಲ್ಲಿ ವಿವರಿಸಿದ್ದರು. 

ಪತ್ನಿ ಮಾಲಾ ದೂರಿನ ಅನ್ವಯ ಪ್ರಸನ್ನ ಅವರ ಪೂರ್ವಭಾವಿ ವಿಚಾರಣೆ ನಡೆಸಿ, ಸಲ್ಲಿಸಿದ್ದ ಹೊನ್ನಾಳಿ ಪೊಲೀಸ್ ಠಾಣೆ ಪೊಲೀಸ್  ಇನ್‌ಸ್ಪೆಕ್ಟ‌ರ್ ವರದಿ ಹಾಗೂ ದಾಖಲೆಗಳನ್ನು ಆಧರಿಸಿ, ಸಿಬ್ಬಂದಿ ಪ್ರಸನ್ನ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಮಾಡಿ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಆದೇಶ ಹೊರಡಿಸಿದ್ದಾರೆ.

error: Content is protected !!