ಹರಿಹರ : 29 ರಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಡಿ ಕೃತಿಕ ಪೂಜೆ

ಹರಿಹರ : 29 ರಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಡಿ ಕೃತಿಕ ಪೂಜೆ

ಹರಿಹರ, ಜು.25- ನಗರದ ಹೊಸಭರಂಪುರ ಬಡಾವಣೆಯ ನೂರ ಎಂಟು ಲಿಂಗೇಶ್ವರ ದೇವಸ್ಥಾನ ಹಿಂಬದಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇದೇ ದಿನಾಂಕ 29 ರ ಸೋಮವಾರ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಆಡಿ ಕೃತ್ತಿಕ ಪೂಜೆ ನಡೆಯಲಿದೆ.

ಅಂದು ಬೆಳಗ್ಗೆ 8.30 ಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಪುಣ್ಯಾಹ ಮಹಾ ಸಂಕಲ್ಪ, 9 ಗಂಟೆಗೆ ಮಹಾ ಮಸ್ತಕಾಭಿಷೇಕ, 12 ಗಂಟೆಗೆ ದೀಪಾರಾಧನೆ ಮಹಾಮಂಗಳಾರತಿ, 12.30 ಕ್ಕೆ ಮಹಾ ಪ್ರಸಾದ ವಿನಿಯೋಗ, ಸಂಜೆ 7.30 ಕ್ಕೆ ದೀಪ ನಮಸ್ಕಾರ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯುತ್ತವೆ ಎಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸಮಿತಿಯ ಟಿ.ರಾಜೇಂದ್ರನ್, ಎ.ಶೇಖರ್, ಜಿ.ಸುಬ್ರಹ್ಮಣ್ಯಿ, ಪ್ರಧಾನ ಅರ್ಚಕರು ಜಡೆ ರಮೇಶರಾವ್ ತಿಳಿಸಿದ್ದಾರೆ.

error: Content is protected !!