ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ

ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ

ದಾವಣಗೆರೆ, ಜು. 25 – 2024-25ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ 30ನೇ ವಾರ್ಡ್ ಆವರಗೆರೆ ಮನೆ-ಮನೆಗೆ ತೆರಳಿ ಇಂದು ಸರ್ವೆ ನಡೆಸಲಾಯಿತು.

ಮಹಾನಗರ ಪಾಲಿಕೆ ಯಿಂದ ಈ ಕಾರ್ಯಕ್ರಮ ಏರ್ಪಾಡಾಗಿದ್ದು, ಆವರಗೆರೆಯ ಬಸವನಗೌಡ ಬಡಾವಣೆಯಲ್ಲಿ ನಡೆದ ಸರ್ವೇ ಕಾರ್ಯಕ್ಕೆ 30ನೇ ವಾರ್ಡಿನ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಜಯಮ್ಮ ಗೋಪಿನಾಯ್ಕ್ ಮತ್ತು ಕಂದಾಯ ಪರಿವೀಕ್ಷಕರೂ ಆಗಿರುವ ನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ಚಾಲನೆ ನೀಡಿದರು.

ಪಾಲಿಕೆಯ ಆರೋಗ್ಯ ಶಾಖೆಯ ಲೋಹಿತ್, ಹಾಲೇಶ್, ಈ ಭಾಗದ ಮುಖಂಡ ಗೋಪಿನಾಯ್ಕ್ ಮತ್ತಿತರರು ಸರ್ವೇ ಕಾರ್ಯದಲ್ಲಿ ಭಾಗವಹಿಸಿದ್ದರು.

error: Content is protected !!