ಹೆದ್ದಾರಿ : ಗುಂಡಿ ಮುಚ್ಚುವ ಕೆಲಸ ಆರಂಭ

ಹೆದ್ದಾರಿ : ಗುಂಡಿ ಮುಚ್ಚುವ ಕೆಲಸ ಆರಂಭ

`ಜನತಾವಾಣಿ’ ವರದಿಗೆ ಸ್ಪಂದನೆ

ಮಲೇಬೆನ್ನೂರು, ಜು.25- ಸತತ ಮಳೆಯಿಂದಾಗಿ ಪಟ್ಟಣದಲ್ಲಿ ಹಾಯ್ದು ಹೋಗಿರುವ ಶಿವಮೊಗ್ಗ ಹೆದ್ದಾರಿಯಲ್ಲಿ ಬಿದ್ದಿರುವ ದೊಡ್ಡ – ದೊಡ್ಡ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಗುರುವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. 

ಕುಂಬಳೂರಿನಿಂದ ಮಲೇಬೆನ್ನೂರಿನ ನೀರಾವರಿ ಇಲಾಖೆ ಕಛೇರಿವರೆಗೆ ಹೆದ್ದಾರಿಯಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿದ್ದು, ಅಪಘಾತಕ್ಕೆ ಆಹ್ವಾನ ನೀಡುವಂತಿರುವುದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎಂಬ ಸುದ್ದಿಯನ್ನು `ಜನತಾವಾಣಿ’ ಗುರುವಾರ ಪ್ರಕಟಿಸಿತ್ತು. 

ಈ ಕುರಿತು ತಕ್ಷಣ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ತಾತ್ಕಾಲಿಕವಾಗಿ ದೊಡ್ಡ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭಿಸಿರುವುದಕ್ಕೆ ವಾಹನ ಸವಾರರು ಮತ್ತು ಮಲೇಬೆನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ಮಾಜಿ ಅಧ್ಯಕ್ಷ ಓ. ಜಿ. ರುದ್ರಗೌಡ, ಪುರಸಭೆ ಸದಸ್ಯ ಎ.ಆರೀಫ್ ಅಲಿ ಹಾಗೂ  ಕುಂಬಳೂರಿನ ಎಂ.ವಾಸುದೇವಮೂರ್ತಿ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

error: Content is protected !!