ನಿರ್ಮಲ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಅಭಿವೃದ್ಧಿ ಪೂರಕವಾಗಿದ್ದು, ಜನಪರವಾಗಿದ್ದು, ಹಣದುಬ್ಬರ ನಿಯಂತ್ರಿಸುವಲ್ಲಿ ಯಶಸ್ವಿಯಾಗುವ, ಉತ್ತಮ ಆರ್ಥಿಕತೆಗೆ ಪೂರಕವಾಗಿರುವ ಬಜೆಟ್ ಆಗಿದೆ.
ರಕ್ಷಣಾ ಇಲಾಖೆಗೆ ರೂ 4.54 ಲಕ್ಷ ಮೀಸಲಿಟ್ಟಿರುವುದು. ಕೃಷಿ ಕ್ಷೇತ್ರಕ್ಕೆ ರೂ 1.4 ಲಕ್ಷ ಕೋಟಿ, ಗ್ರಾಮೀಣಾಭಿವೃದ್ಧಿಗೆ ರೂ 2.66 ಲಕ್ಷ ಕೋಟಿ. ಉದ್ಯೋಗ ಹಾಗೂ ಕೌಶಲಾಭಿವೃದ್ಧಿಗೆ 1.48 ಲಕ್ಷ ಕೋಟಿ. ಮೂಲಸೌಕರ್ಯ ಅಭಿವೃದ್ಧಿಗೆ ರೂ, 11 ಲಕ್ಷ ಕೋಟಿ. ಆರೋಗ್ಯಕ್ಕಾಗಿ ರೂ 89,287 ಕೋಟಿ. ಇಂಧನ ಇಲಾಖೆಗೆರೂ 68,796 ಕೋಟಿ. ಸಮಾಜ ಕಲ್ಯಾಣ ಇಲಾಖೆಗೆ ರೂ 5651ಕೋಟಿ. ಮೀಸಲಿರಿಸಿರುವುದು ಸ್ವಾಗತರ್ಹವಾಗಿದೆ.
ಪಿಎಂ ಅವಾಸ್ ಯೋಜನೆ ಅಡಿ 3,00,000 ಮನೆ ನಿರ್ಮಾಣ. ಗ್ರೀಪ್ ಕಲ್ಯಾಣ್ ಯೋಜನೆಯನ್ನು ಐದು ವರ್ಷದವರೆಗೂ ವಿಸ್ತರಿಸಿರುವುದು. ಮಹಿಳಾ ಉದ್ಯೋಗಿಗಳಿಗೆ ಹೊಸ ಹಾಸ್ಟೆಲ್ ವ್ಯವಸ್ಥೆ. ಉನ್ನತ ಶಿಕ್ಷಣಕ್ಕೆ ರೂ. 10 ಲಕ್ಷ ವರೆಗೂ ಸಾಲ ಸೌಲಭ್ಯ. ಮುದ್ರಾ ಯೋಜನೆ ಅಡಿ ಸಾಲದ ಮುದ್ದ ಇಪ್ಪತ್ತು ಲಕ್ಷ ಇರುವವರೆಗೂ ಏರಿಕೆ ಮಾಡಿರುವುದು. 400 ಜಿಲ್ಲಾ ಕೇಂದ್ರಗಳಲ್ಲಿ ಬಯೋ ರಿಸರ್ಚ್ ಕೇಂದ್ರ ಸ್ಥಾಪನೆ. 12 ಕೈಗಾರಿಕಾ ಪಾರ್ಕ್ ಸ್ಥಾಪನೆ. 500 ಬೃಹತ್ ಕಂಪನಿಗಳಲ್ಲಿ 12 ತಿಂಗಳು ತರಬೇತಿ. ಕೈಗಾರಿಕೆಗಳಲ್ಲಿ ಒಂದು ಕೋಟಿ ಯುವಕರಿಗೆ ತರಬೇತಿ. ಮಹಿಳಾ ಸಬಲೀಕರಣಕ್ಕೆ ರೂಮ್ 3 ಲಕ್ಷ ಕೋಟಿ ಮೀಸಲು. ಇವುಗಳಿಂದ ಎಲ್ಲಾ ವರ್ಗದ ಜನರಿಗೂ. ಈ ಬಜೆಟ್ನಿಂದ ಅನುಕೂಲವಾಗಲಿದೆ.
ಕ್ಯಾನ್ಸರ್ ಔಷಧಗಳು. ಮೊಬೈಲ್ ಮತ್ತು ಚಾರ್ಜ್ಗಳು, ಚರ್ಮ ಉತ್ಪನ್ನಗಳು, ಉಣ್ಣೆ ಬಟ್ಟೆಗಳು, ಸೋಲಾರ್ ಪೆನಾಲ್ ಗಳು. ಚಿನ್ನಾ, ಬೆಲೆಯಲ್ಲಿ ಇಳಿಕೆಯಾಗಲು ತೆಗೆದುಕೊಂಡಿರುವ ಕ್ರಮ ಜನಪರ ಬಜೆಟ್ ಎನ್ನಬಹುದು.
– ಡಿ.ಎಸ್. ಶಿವಶಂಕರ್, ಬಿಜೆಪಿ ಹಿರಿಯ ಮುಖಂಡರು